Districts

ರೈಲಿನಿಂದ ಬಿದ್ದು ಎಂಜಿನಿಯರ್‌ ಸಾವು

ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಬೆಂಗಳೂರಿನ ಬಿಬಿಎಂಪಿ ಅಧೀಕ್ಷಕ ಎಂಜಿನಿಯರ್ ಮೃತಪಟ್ಟ ಘಟನೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಡೆದಿದೆ. ಭಾನುವಾರ ತಡರಾತ್ರಿ ರಂಗರಾಜು.ಎಸ್‌.ಎ (59) ಸಾವನ್ನಪ್ಪಿದ ನತದೃಷ್ಟ ಎಂಜಿನಿಯರ್.‌
ಭಾನುವಾರ ತಡ ರಾತ್ರಿ ರಂಗರಾಜು ಅವರು, ಬೆಂಗಳೂರಿಗೆ ತೆರಳಬೇಕಿತ್ತು. ಆದರೆ ಬೆಂಗಳೂರು ರೈಲು ಹತ್ತುವ ಬದಲು ಬೆಳಗಾವಿಗೆ ಹೋಗುವ ರೈಲು ಹತ್ತಿಬಿಟ್ಟಿದ್ದರು. ಯಾರೋ ಪ್ರಯಾಣಿಕರು ಇದು ಬೆಳಗಾವಿಗೆ ಹೋಗುವ ರೈಲು ಎಂದು ಹೇಳಿದ್ದಾರೆ. ಅಷ್ಟೊತ್ತಿಗಾಗಲೇ ರೈಲು ಹೊರಡುತ್ತಿದ್ದರು. ರಂಗರಾಜು ಅವರು ಚಲಿಸುತ್ತಿದ್ದ ರೈಲುನಿಂದ ದಡಬಡನೆ ಇಳಿಯಲು ಹೋಗಿದ್ದಾರೆ. ಈ ವೇಳೆ ಪ್ಲಾಟ್‌ ಫಾರ್ಮ್‌ನಲ್ಲಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Share Post