BengaluruPolitics

ಯೋಗೇಶ್ವರ್‌ ಕಾಂಗ್ರೆಸ್‌ ಸೇರೋದು ಫಿಕ್ಸ್‌; ಚನ್ನಪಟ್ಟಣದ ಕೈ ಅಭ್ಯರ್ಥಿ!

ಬೆಂಗಳೂರು; ಸಿ.ಪಿ.ಯೋಗೇಶ್ವರ್‌ ಕಾಂಗ್ರೆಸ್‌ ಸೇರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡೋದು ಬಹುತೇಕ ಫಿಕ್ಸ್‌ ಆಗಿದೆ.. ಎನ್‌ಡಿಎ ಟಿಕೆಟ್‌ ಸಿಗಬಹುದು ಎಂದುಇ ಕಾದು ಕುಳಿತಿದ್ದ ಯೋಗೇಶ್ವರ್‌ ಗೆ ನಿರಾಸೆಯಾಗಿತ್ತು.. ಕಳೆದ ರಾತ್ರಿ ಕಾಂಗ್ರೆಸ್‌ ನಾಯಕರ ಜೊತೆ ಅವರು ಮಾತುಕತೆ ನಡೆದಿದ್ದು, ಅದು ಯಶಸ್ವಿಯಾಗಿದೆ.. ಇಂದು ಕೂಡಾ ಕೂಡಾ ಡಿ.ಕೆ.ಶಿವಕುಮಾರ್‌ ಅವರ ಮನೆಗೆ ಭೇಟಿ ನೀಡಿದ್ದ ಯೋಗೇಶ್ವರ್‌ ಮಾತುಕತೆ ನಡೆಸಿದ್ದರು.. ಈಗ ಇಬ್ಬರೂ ನಾಯಕರು ಒಂದೇ ಕಾರಿನಲ್ಲಿ ಹೋಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.. ಇದರಿಂದಾಗಿ ಯೋಗೇಶ್ವರ್‌ ಕಾಂಗ್ರೆಸ್‌ ಸೇರೋದು ಫಿಕ್ಸ್‌ ಆಗಿದೆ..
ಚನ್ನಪಟ್ಟಣದಿಂದ ಅವರೇ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.. ಜೆಡಿಎಸ್‌ನಿಂದ ಯಾರು ಕಣಕ್ಕಿಳಿಯುತ್ತಾರೆ ಅನ್ನೋದು ಈಗ ಕುತೂಹಲಕ್ಕೆ ಕಾರಣವಾಗಿದೆ..

Share Post