CrimeDistricts

ಸ್ನೇಹಿತನ ಕತ್ತು ಸೀಳಿ ಕೊಂದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ!

ಉಡುಪಿ; ಕುಡಿದ ಮತ್ತಿನಲ್ಲಿ ಇಬ್ಬರು ಸ್ನೇಹಿತರು ಜಗಳ ಆಡಿದ್ದು, ಇದು ವಿಕೋಪಕ್ಕೆ ತಿರುಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.. ವ್ಯಕ್ತಿಯೊಬ್ಬನನ್ನು ಸ್ನೇಹಿತನೇ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.. ಅನಂತರ ಪೊಲೀಸರಿಗೆ ಕರೆ ಮಾಡಿ ಕೊಲೆ ವಿಚಾರವನ್ನು ತಿಳಿಸಿದ್ದಾನೆ..
ಉಡುಪಿಯ ಹಳೇ ಸರ್ಕಾರಿ ಬಸ್‌ ನಿಲ್ದಾಣದ ಬಳಿ ಇರುವ ಕೃಷ್ಣ ಕೃಪಾ ಬಿಲ್ಡಿಂಗ್‌ನಲ ನೆಲ ಅಂತಸ್ತಿನಲ್ಲಿರುವ ಕೊಠಡಿಯಲ್ಲಿ ಈ ಘಟನೆ ನಡೆದಿದೆ.. 32 ವರ್ಷ ಪ್ರಶಾಂತ್‌ ಶೆಟ್ಟಿ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ.. ವಿಜಯನಗರ ಜಿಲ್ಲೆ ಹೂವಿನ ಹಡಗಲಿಯ ನಿವಾಸಿಯಾಗಿರುವ ಈರಣ್ಣ ಯಾನೆ ದಿನೇಶ್‌ ಎಂಬಾತನೇ ಕೊಲೆ ಮಾಡಿರುವ ಆರೋಪಿ. ಆರೋಪಿ ಕೊಲೆಯಾದ ಪ್ರಶಾಂತ್‌ ಶೆಟ್ಟಿ ಸ್ನೇಹಿತನೇ ಎಂದು ತಿಳಿದುಬಂದಿದೆ..
ಇಬ್ಬರೂ ಕೂಡಾ ಕಂಠಪೂರ್ತಿ ಕುಡಿದಿದ್ದರು.. ಇದೇ ವೇಳೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ.. ಈ ವೇಳೆ ಈರಣ್ಣ ಯಾನೆ ದಿನೇಶ್‌ ಹರಿತವಾಗಿ ಚೂರಿಯಿಂದ ಪ್ರಶಾಂತ್‌ ಶೆಟ್ಟಿಯ ಕತ್ತು ಕುಯ್ದಿದ್ದಾನೆ.. ಇದರಿಂದ ತೀವ್ರ ರಕ್ತಸ್ರಾವವಾಗಿ ಪ್ರಶಾಂತ್‌ ಶೆಟ್ಟಿ ಸಾವನ್ನಪ್ಪಿದ್ದಾರೆ.. ಅನಂತರ ಆರೋಪಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದೆ.. ಕ್ಷುಲ್ಲಕ ಕಾರಣಕ್ಕೆ ಕೊಲೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ.. ಆದ್ರೆ ಇದ್ರೆ ಹಿಂದಿನ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ..

Share Post