DistrictsPolitics

ಪ್ರಧಾನಿ ಮೋದಿ ಬದಲಾವಣೆಗೆ ಆರ್‌ಎಸ್‌ಎಸ್‌ ಸಭೆ; ಸಚಿವ ಸಂತೋಷ್‌ ಲಾಡ್‌

ಬೀದರ್; ಪ್ರಧಾನಮಂತ್ರಿ ನರೇಂದ್ರ ಮೋದಿ ಬದಲಾವಣೆಗೆ ಆರ್‌ಎಸ್‌ಎಸ್‌ ನಿಂದ ಸಭೆ ನಡೆಸಲಾಗಿದೆ ಎಂದು ಸಚಿವ ಸಂತೋಷ್‌ ಲಾಡ್‌ ಬಾಂಬ್‌ ಸಿಡಿಸಿದ್ದಾರೆ. ಬೀದರ್‌ನ ಬಸವಕಲ್ಯಾಣದಲ್ಲಿ ಸಿಎಂ ಸಿದ್ದರಾಮಯ್ಯ ಬದಲಾಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಈ ರೀತಿ ಹೇಳಿದ್ದಾರೆ..
ರಾಜ್ಯದಲ್ಲಿ ಸಿದ್ದರಾಮಯ್ಯರ ಸ್ಥಾನ ಬದಲಾಗೋದಿಲ್ಲ.. ಆದ್ರೆ ಆರ್‌ಎಸ್‌ನಿಂದ ಪ್ರಧಾನಿ ಮೋದಿಯವರನ್ನು ಬದಲಾಯಿಸಬೇಕು ಎಂದು ಸಭೆ ನಡೆಸಲಾಗಿದೆ ಎಂದು ಹೇಳುವ ಮೂಲಕ ಚರ್ಚೆಗೆ ಕಾರಣರಾಗಿದ್ದಾರೆ.. ಮೋದಿಯವರನ್ನು ಬದಲಾಯಿಸೋದಕ್ಕೆ ಪ್ಲ್ಯಾನ್‌ ಮಾಡಲಾಗುತ್ತಿದೆ.. ಈ ಬಗ್ಗೆ ಬಿಜೆಪಿ ನಾಯಕರನ್ನೇ ಕೇಳಿ ಎಂದು ಸಚಿವರು ಹೇಳಿದರು..
ಚಾಮರಾಜನಗರದಲ್ಲಿ ಸಚಿವರಾದ ಸತೀಶ್‌ ಜಾರಕಿಹೊಳಿ, ಡಾ.ಜಿ.ಪರಮೇಶ್ವರ್‌, ಹೆಚ್‌.ಸಿ.ಮಹಾದೇವಪ್ಪ ನಡೆಸಿದ ಡಿನ್ನರ್‌ ಸಭೆಯ ಬಗ್ಗೆಯೂ ಪ್ರಸ್ತಾಪಿಸಲಾಯಿತು.. ಇದಕ್ಕೆ ಉತ್ತರಿಸಿದ ಸಂತೋಷ್‌ ಲಾಡ್‌ ಎಲ್ಲಾ ಕಡೆ ಸಭೆ ನಡೆಸುವುದು ಸಾಮಾನ್ಯ ಎಂದು ಹೇಳಿದರು.

Share Post