CrimeDistricts

ಮೈಸೂರಿನ ಖ್ಯಾತ ವೈದ್ಯೆ ಅನುಮಾನಾಸ್ಪದ ರೀತಿಯಲ್ಲಿ ಸಾವು!

ಮೈಸೂರು; ಮೈಸೂರಿನಲ್ಲಿ ಖ್ಯಾತ ವೈದ್ಯೆಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.. ಮೈಸೂರಿನ ಆರ್‌ಟಿಒ ವೃತ್ತದ ಬಳಿಯ ಡೆನ್ಮಾರ್‌ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.. ಮೈಸೂರಿನಲ್ಲಿ ಖ್ಯಾತ ಪ್ರಸೂತಿ ತಜ್ಞೆಯಾಗಿರುವ ಡಾ.ಜಿ.ಎಸ್‌.ವಿದ್ಯಾಧರೆ ಅವರೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದವರಾಗಿದ್ದಾರೆ..
ಇಂದು ಬೆಳಗ್ಗೆ ಡೆನ್ಮಾರ್‌ ಅಪಾರ್ಟ್‌ಮೆಂಟ್‌ನ ಮನೆಯಲ್ಲಿ ವೈದ್ಯೆ ವಿದ್ಯಾಧರೆ ಅವರ ಮೃತದೇಹ ಪತ್ತೆಯಾಗಿದೆ.. ನನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಗಂಡನ ಕುಟುಂಬದ ವಿರುದ್ಧ ವಿದ್ಯಾಧರೆ ಪೋಷಕರು ಆರೋಪ ಮಾಡಿದ್ದಾರೆ.. ಡಾ.ವಿದ್ಯಾಧರೆ ಅವರು ಮಂಡ್ಯ ಜಿಲ್ಲೆಯ ಗೌಡಗೆರೆಯವರು.. ಇವರು 14 ವರ್ಷದ ಹಿಂದೆ ಕೆಆರ್‌ ಆಸ್ಪತ್ರೆಯಲ್ಲಿ ಪ್ರಖ್ಯಾತ ಮೂಳೆ ತಜ್ಞರಾಗಿರುವ ಡಾ.ಷಣ್ಮುಖ ಅವರನ್ನು ಮದುವೆಯಾಗಿದ್ದರು.. ಆದ್ರೆ ಹಲವು ವರ್ಷಗಳಿಂದ ಇವರಿಬ್ಬರ ನಡುವೆ ವಿರಸ ಇತ್ತು ಎಂದು ಹೇಳಲಾಗುತ್ತಿದೆ..
ಮನಸ್ತಾಪದಿಂದಾಗಿಯೇ ನನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಡಾ.ಷಣ್ಮುಖ ವಿರುದ್ಧ ವಿದ್ಯಾಧರೆ ಪೋಷಕರು ಆರೋಪ ಮಾಡುತ್ತಿದ್ದಾರೆ.. ಈ ಬಗ್ಗೆ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..

Share Post