BengaluruPolitics

ಹಂದಿಗೆ ಹೋಲಿಸಿದ ಎಡಿಜಿಪಿ ಚಂದ್ರಶೇಖರ್‌ ವಿರುದ್ಧ ಮುಗಿಬಿದ್ದ ಜೆಡಿಎಸ್‌

ಬೆಂಗಳೂರು; ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ವಿರುದ್ಧ ಕುಮಾರಸ್ವಾಮಿ ಆರೋಪ ಮಾಡಿದ್ದಕ್ಕೆ ಚಂದ್ರಶೇಖರ್‌ ಅವರು ಕುಮಾರಸ್ವಾಮಿಯವರನ್ನು ಹಂದಿಗೆ ಹೋಲಿಸಿದ್ದರು.. ತಮ್ಮ ಸಿಬ್ಬಂದಿಗೆ ಪತ್ರ ಬರೆದಿದ್ದು, ಅದರಲ್ಲಿ ಹಂದಿ ವಿರುದ್ಧ ಗುದ್ದಾಡೋದಕ್ಕೆ ಹೋಗಬಾರದು ಎಂಬರ್ಥದಲ್ಲಿ ಬರೆದುಕೊಂಡಿದ್ದರು.. ಈ ಬೆನ್ನಲ್ಲೇ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಪೊಲೀಸ್‌ ಅಧಿಕಾರಿ ಚಂದ್ರಶೇಖರ್‌ ವಿರುದ್ಧ ತಿರುಗಿಬಿದ್ದಿದ್ದಾರೆ.. ಅದ್ರಲ್ಲೂ ಜೆಡಿಎಸ್‌ ಪಕ್ಷ ಚಂದ್ರಶೇಖರ್‌ ವಿರುದ್ಧ ಮತ್ತೊಂದು ಗಂಭೀರ ಆರೋಪವೊಂದನ್ನು ಮಾಡಿದೆ..
ಭೂವ್ಯವಹಾರದಲ್ಲಿ 20 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಕಡುಭ್ರಷ್ಟ ಅಧಿಕಾರಿ ನೀವಲ್ಲವೇ ಎಂದು ಚಂದ್ರಶೇಖರ್‌ ಅವರನ್ನು ಜೆಡಿಎಸ್‌ ಪ್ರಶ್ನೆ ಮಾಡಿದೆ.. ಕೇಂದ್ರ ಸಚಿವರೊಬ್ಬರನ್ನು ಅತ್ಯಂತ ಕೀಳು ಭಾಷೆಯಲ್ಲಿ ಸಂಬೋಧಿಸಿರುವುದು ಅಕ್ಷಮ್ಯ ಎಂದೂ ಜೆಡಿಎಸ್‌ ಹೇಳಿದೆ.. ನೀವು ಕಟ್ಟುತ್ತಿರುವ ಬಹುಮಹಡಿ ವಾಣಿಜ್ಯ ಕಟ್ಟಡ ಎಷ್ಟು ಕೋಟಿ ಲಂಚ ಪಡೆದಿದ್ದರಿಂದ ಕಟ್ಟುತ್ತಿದ್ದೀರಿ ಎಂದೂ ಪ್ರಶ್ನೆ ಮಾಡಲಾಗಿದೆ..
ನಿಮ್ಮ ಪತ್ನಿ ಹೆಸರಲ್ಲಿ ಕಟ್ಟುತ್ತಿರುವ ಬಹುಮಹಡಿ ಕಟ್ಟಡ, ರಾಜಕಾಲುವೆ ಮೇಲೆ ನಿರ್ಮಿಸ್ತಿರೋ ಬಹು ಮಹಡಿಯ ವಾಣಿಜ್ಯ ಕಟ್ಟಡ ಬಗ್ಗೆಯೂ ತನಿಖೆ ನಡೆಯಬೇಕಲ್ಲವೇ ಎಂದೂ ಜೆಡಿಎಸ್‌ ಕೇಳಿದೆ..

Share Post