CrimeDistrictsPolitics

ಲೋಕಾಯುಕ್ತ SP ಯನ್ನು CM ಕಿಡ್ನಾಪ್ ಮಾಡಿಸಿರಬಹುದು; ಸ್ನೇಹಮಯಿ ಕೃಷ್ಣ

ಮೈಸೂರು; ಸಿಎಂ ವಿರುದ್ದ FIR ದಾಖಲು ಮಾಡಬೇಕಾಗಿದ್ದ ಮೈಸೂರು ಲೋಕಾಯುಕ್ತ SP ಕಾಣಿಸುತ್ತಿಲ್ಲ, ಬಹುಷಃ ಅವರನ್ನು ಸಿದ್ದರಾಮಯ್ಯ ಅವರೇ ಕಿಡ್ನಾಪ್ ಮಾಡಿಸಿರಬಹುದು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದಾರೆ..

   ಮುಡಾ ಹಗರಣ ಸಂಬಂಧ ನಿನ್ನೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ. ಡಿಸೆಂಬರ್ 24ರೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದೆ. ಆದ್ರೆ FIR ದಾಖಲಿಸಬೇಕಿದ್ದ ಲೋಕಾಯುಕ್ತ SP ಕಾಣಿಸುತ್ತಿಲ್ಲ.. ಅವರು ಫೋನ್ ಕೂಡಾ ತೆಗೆಯುತ್ತಿಲ್ಲ. ಎಸ್ ಪಿ ಕಾಣೆಯಾಗಿದ್ದಾರೆ ಎಂದು ದೂರು ಕೊಡುತ್ತೇನೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಅವರನ್ನು ಸಿಎಂ ಸಿದ್ದರಾಮಯ್ಯ ಕಿಡ್ನಾಪ್ ಮಾಡಿಸಿದ್ದರೂ ಮಾಡಿರಬಹುದು ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

  ಮಧ್ಯಾಹ್ನ 3 ಗಂಟೆ ಒಳಗೆ FIR ಹಾಕದಿದ್ದರೆ ಎಸ್ ಪಿ ವಿರುದ್ಧವೇ ದೂರು ನೀಡುತ್ತೇನೆ ಎಂದಿದ್ದಾರೆ .

Share Post