CrimePolitics

ಸಿಎಂ ಸಿದ್ದರಾಮಯ್ಯಗೆ MUDA ಕಂಟಕ ತಂದಿದ್ದು ಇವರೇನಾ?

ಮೈಸೂರು; ಮುಡಾ ಪ್ರಕರಣ ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಸಂಕಷ್ಟ ತಂದೊಡ್ಡಿದೆ.. ಈ ಸಂಕಷ್ಟಕ್ಕೆ ಮೊದಲ ಕಾರಣ ಸಿಎಂ ಪತ್ನಿಯ ಸಹೋದರನಿಗೆ ಜಮೀನು ಮಾರಾಟ ಮಾಡಿದ ವ್ಯಕ್ತಿ.. ಸಿಎಂ ಪತ್ನಿ ಪಾರ್ವತಿ ಸಹೋದರನಿಗೆ ದೇವರಾಜು ಎಂಬುವವರು ಜಮೀನು ಮಾರಿದ್ದರು. ಅನಂತರ ಸಹೋದರ ಸಿಎಂ ಪತ್ನಿ ಪಾರ್ವತಿಗೆ ಅರಸಿನ ಕುಂಕುಮವಾಗಿ ಈ ಜಮೀನು ನೀಡಿದ್ದರು..

  ಈ ಜಾಗವನ್ನು ಮುಡಾ ವಶಪಡಿಸಿಕೊಂಡಿದ್ದು, ಅದಕ್ಕೆ ಪ್ರತಿಯಾಗಿ ಮೈಸೂರಿನ ಪ್ರತಿಷ್ಠಿತ ಬಡಾವಣೆ ವಿಜಯನಗರದಲ್ಲಿ 14 ಸೈಟ್ ನೀಡಲಾಗಿತ್ತು. ಇದೆ ಸಿದ್ದರಾಮಯ್ಯ ಗೆ ಕಂಟಕವಾಗಿದೆ. ಈ  ಸಮಸ್ಯೆಯ ರೂವಾರಿ ಎನಿಸಿಕೊಂಡಿರುವ ದೇವರಾಜು ಪೋಟೋವನ್ನು ಮೈಸೂರಿನ ವೆಬ್ಸೈಟ್ ಒಂದು ರಿವೀಲ್ ಮಾಡಿದೆ.

ಮುಡಾ ಹಗರಣ ಬೆಳಕಿಗೆ ಬಂದ ದಿನದಿಂದ ದೇವರಾಜು ಫೋಟೋ ಬಹಿರಂಗವಾಗಿರಲಿಲ್ಲ. ಆದರೆ ಖಾಸಗಿ ಮಾಧ್ಯಮ ಇದನ್ನು ಬಹಿರಂಗ ಮಾಡಿದೆ.. ಪಾರ್ವತಿ ಸಹೋದರನ ಹೆಸರಿಗೆ ಆಸ್ತಿ ಬರೆದುಕೊಟ್ಟಿದ್ದು ಮೈಸೂರಿನ ಕೆಸರೆ ಗ್ರಾಮದ ದೇವರಾಜು. ಇದೀಗ ಮುಡಾ ಹಗರಣದಲ್ಲಿ ದೇವರಾಜು A 4 ಆರೋಪಿ ಎಂದು ಗೊತ್ತಾಗಿದೆ.

ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ‌ ಹೊಂದಿರುವ ದೇವರಾಜು ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಿದ್ದಾರೆ ಎಂದು ಗೊತ್ತಾಗಿದೆ.

Share Post