CrimeDistricts

ತುಮಕೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ!

ತುಮಕೂರು;ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ಯುವತಿಗೆ ವ್ಯಕ್ತಿಯೊಬ್ಬ ನಿಂದನೆ ಮಾಡಿದ್ದಾನೆ.. ಈ ವೇಳೆ ವ್ಯಕ್ತಿಯೊಬ್ಬ ಯುವತಿ ಪರ ಮಾತನಾಡಿದ್ದಕ್ಕೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.ತುಮಕೂರು ನಗರದ ಮರಳೂರು‌ ದಿಣ್ಣೆಯಲ್ಲಿ ಈ ಘಟನೆ ನಡೆದಿದೆ..

ಇರ್ಫಾನ್ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿ.ವಿಲೀಂಗ್ ಮಾಡುತ್ತಿದ್ದ ಇರ್ಫಾನ್ ಬೈಕ್ ಗೆ ಅಡ್ಡ ಬಂದ ಯುವತಿ.ದ್ವಿಚಕ್ರ ವಾಹನಕ್ಕೆ ಅಡ್ಡ ಬಂದು ಯುವತಿಯನ್ನ ಕೆಳಗೆ ತಳ್ಳಿದ ಇರ್ಫಾನ್. ಕೆಳಗೆ ಬಿದ್ದಿದ್ದ ಯುವತಿಯನ್ನ ಚುಡಾಯಿಸಿ ಜಗಳ ಮಾಡಿದ್ದ ಇರ್ಫಾನ್.

ಯುವತಿಯ ರಕ್ಷಣೆಗೆ ಬಂದಿದ್ದ ಮತ್ತೊಬ್ಬ ಇರ್ಫಾನ್ ಮತ್ತು ಸಾಧಿಕ್.ಆರೋಪಿ ಇರ್ಫಾನ್ ಗೆ ಬೈದು ಬುದ್ದಿ ಹೇಳಿ, ಯುವತಿಯ ರಕ್ಷಣೆ.ಇದ್ರಿಂದ ಕುಪಿತಗೊಂಡ ಇರ್ಫಾನ್ ಸ್ನೇಹಿತರೊಂದಿಗೆ ಆಗಮಿಸಿ ಸಾಧಿಕ್ – ಇರ್ಫಾನ್ ಮೇಲೆ ಮನಸೋ ಇಚ್ಚೆ ಹಲ್ಲೆ‌‌.

ಕುತ್ತಿಗೆ, ಕೈ, ತಲೆಗೆ ಲಾಂಗ್ ನಿಂದ ಹಲ್ಲೆ.ಇರ್ಫಾನ್ (30) ಸ್ಥಿತಿ ಗಂಭೀರ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು.

ಹಲ್ಲೆ ಮಾಡಿರುವ ಇರ್ಫಾನ್ ಮತ್ತು ಆತನ ಸ್ನೇಹಿತ ಸ್ಥಳದಿಂದ ಪರಾರಿ.ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ.

ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೀತಿಮೀರಿದ ಪುಂಡರ ಹಾವಳಿ.ಪುಂಡರ ಹಾವಳಿ ತಡೆಯಲು ಜಯನಗರ ಪೊಲೀಸರು ವಿಫಲ.ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

Share Post