DistrictsHealth

ತಂದೆಯ ಶವವನ್ನು ಬೈಕ್ ನಲ್ಲಿ ಸಾಗಿಸಿದ ಮಕ್ಕಳು

ತುಮಕೂರು;ಬೈ ಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು.ಆಂಬ್ಯುಲೆನ್ಸ್ ಸಿಗದ ಪರಿಣಾಮ ಬೈಕ್ ನಲ್ಲೇ ಶವ ಸಾಗಿಸಿದ ಮಕ್ಕಳು.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್ ಹೊಸಕೋಟೆಯಲ್ಲಿ ಘಟನೆ.ಹೊನ್ನೂರಪ್ಪ (80) ವೈ‌.ಎನ್ ಹೊಸಕೋಟೆಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದರು.

ಅನಾರೋಗ್ಯದ ಕಾರಣ ಹೊನ್ನೂರಪ್ಪನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಮೃತದೇಹ ಸಾಗಿಸಲು ಆಂಬ್ಯುಲೆನ್ಸ್ ಸಿಗದ ಕಾರಣ ಬೈಕ್ ನ ಮಧ್ಯದಲ್ಲಿ ಕುರಿಸಿಕೊಂಡು ಹೋಗಲಾಯ್ತು.

ವೈ.ಎನ್ ಹೊಸಕೋಟೆಯಿಂದ ದಳವಾಯಿಹಳ್ಳಿಗೆ ಸಾಗಿಸಿದ ಮಕ್ಕಳು.ಮೃತದೇಹ ಸಾಗಿಸಲು ಆಂಬ್ಯುಲೆನ್ಸ್ ಸಿಗದೆ ಪರದಾಟ ನಡೆಸಿ ನಂತರ ಬೈಕ್‌ನಲ್ಲೇ ಸಾಗಿಸಿದ ಮಕ್ಕಳು.

ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

Share Post