DistrictsPolitics

ಸಿದ್ದರಾಮಯ್ಯ ಬೆನ್ನಿಗಿದ್ದೇವೆ ಎಂಬ ಮಾತು ನಾಟಕೀಯ; ಜಗದೀಶ್‌ ಶೆಟ್ಟರ್‌

ಹುಬ್ಬಳ್ಳಿ; ಸಿಎಂ ಸಿದ್ದರಾಮಯ್ಯ ಜೊತೆ ನಾವಿದ್ದೇವೆ. ಹೈಕಮಾಂಡ್‌ ಬೆಂಬಲ ಸಿದ್ದರಾಮಯ್ಯ ಅವರಿಗಿದೆ ಅನ್ನೋದು ನಾಟಕೀಯ ಎಂದು ಸಂಸದ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್‌ನಲ್ಲಿ ಸಿಎಂ ವಿರುದ್ಧ ಆದೇಶ ಬಂದರೆ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತದೆ ಎಂದು ಹೇಳಿದ್ದಾರೆ..
ಈಗ ಸುಮ್ಮನೆ ಕಾಂಗ್ರೆಸ್‌ನಲ್ಲಿ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ.. ಸಿದ್ದರಾಮಯ್ಯ ಅವರಿಗೆ ನಮ್ಮೆಲ್ಲರ ಬೆಂಬಲ ಇದೆ ಎಂದು ಹೇಳುತ್ತಿದ್ದಾರೆ.. ಹೈಕಮಾಂಡ್‌ ಕೂಡಾ ಅದೇ ಮಾತನ್ನೇ ಹೇಳುತ್ತಿದೆ.. ಹೈಕಮಾಂಡ್‌ ಸಿದ್ದರಾಮಯ್ಯ ಅವರ ಬೆನ್ನಿಗೆ ಇರುತ್ತದೆ ಎಂದು ಹೇಳುತ್ತಿದ್ದಾರೆ.. ಆದ್ರೆ ಇದೆಲ್ಲಾ ನಾಟಕೀಯ ಮಾತುಗಳು.. ಕೋರ್ಟ್‌ನಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಆದೇಶ ಏನಾದರೂ ಬಂದರೆ, ಹೈಕಮಾಂಡ್‌ ಕಂಡಿತವಾಗಿಯೂ ಅವರ ರಾಜೀನಾಮೆ ಕೇಳುತ್ತೆ ಎಂದು ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ..
ಸಿದ್ದರಾಮಯ್ಯ ಅವರಿಗೆ ಕಾನೂನು ಕಂಟಕ ಎದುರಾದರೆ ಸಿಎಂ ಬದಲಾವಣೆ ಗ್ಯಾರೆಂಟಿ. ಹೀಗಾಗಿಯೇ ಅವರ ಪಕ್ಷದಲ್ಲಿ ಕೆಲವರು ಸಿಎಂ ಆಗಲು ಈಗಿನಿಂದಲೇ ಅಡಿಪಾಯ ಹಾಕುತ್ತಿದ್ದಾರೆ.. ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಆಗಾಗ ದೆಹಲಿಗೆ ಹೋಗಿ ಹೈಕಮಾಂಡ್‌ ನಾಯಕರನ್ನು ಭೇಟಿಯಾಗುತ್ತಿದ್ದಾರೆ.. ಇದು ಸಿಎಂ ಸಿದ್ದರಾಮಯ್ಯರನ್ನು ಸೈಡ್‌ಲೈನ್‌ ಮಾಡುವುದೇ ಆಗಿದೆ ಎಂದು ಜಗದೀಶ್‌ ಶೆಟ್ಟರ್‌ ಇದೇ ವೇಳೆ ಹೇಳಿದ್ದಾರೆ..

 

Share Post