HealthNational

ಶವಯಾತ್ರೆ ವೇಳೆ ಹೆಜ್ಜೇನು ದಾಳಿ; ಮೃತದೇಹ ರಸ್ತೆಯಲ್ಲೇ ಬಿಟ್ಟು ಓಡಿದ ಜನ!

ಮಹಬೂಬಾಬಾದ್‌; ಹಳ್ಳಿಯೊಂದರಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದರು.. ಕುಟುಂಬಸ್ಥರ ಅಶ್ರುತರ್ಪಣದ ನಡುವೆಯೇ ಮೃತದೇಹ ಅಂತಿಮ ಯಾತ್ರೆ ನಡೆಸುತ್ತಿದ್ದರು.. ಅಂತಿಮಯಾತ್ರೆ ವೇಳೆ ಪಟಾಕಿ ಹಚ್ಚಲಾಗಿದ್ದು, ಅದರ ಸದ್ದಿಗೆ ಹೆಜ್ಜೇನು ದಾಳಿ ಮಾಡಿದೆ.. ಇದರಿಂದ ತಪ್ಪಿಸಿಕೊಳ್ಳಲು ಜನ ಮೃತದೇಹವನ್ನು ದಾರಿ ಮಧ್ಯದಲ್ಲೇ ಬಿಟ್ಟು ಓಡಿದ್ದಾರೆ.. ಆಂಧ್ರಪ್ರದೇಶದ ಮೆಹಬೂಬಾಬಾದ್‌ನ ಕೋತಗುಡ ಮಂಡಲದ ಎಂಚಗುಡದಲ್ಲಿ ನಡೆದಿದೆ..

ಎಂಚಗೂಡ ಗ್ರಾಮದ ರುದ್ರಾಪು ವೀರಸ್ವಾಮಿ (70) ಮಂಗಳವಾರ ಮೃತಪಟ್ಟಿದ್ದರು.. ಅವರ ಅಂತ್ಯಸಂಸ್ಕಾರಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.. ಅಂತಿಮ ಯಾತ್ರೆ ನಡೆಸುತ್ತಿದ್ದಾಗ ದಾರಿಯಲ್ಲಿ ಪಟಾಕಿ ಸಿಡಿಸಲಾಗಿದೆ.. ಇದರಿಂದಾಗಿ ಮರದಲ್ಲಿದ್ದ ಹೆಜ್ಜೇನು ದಾಳಿ ಮಾಡಿದೆ..

ಜೇನುನೊಣಗಳು ದಾಳಿ ಮಾಡಿ ಕಚ್ಚಿದ್ದರಿಂದ ಶವ ಹೊತ್ತವರು ಕೂಡ ಮೃತದೇಹವನ್ನು ರಸ್ತೆಯಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ಜೇನುನೊಣಗಳು ಕೆಲವರನ್ನು ಅಟ್ಟಿಸಿಕೊಂಡು ಹೋಗಿವೆ.. ಜೇನುನೊಣಗಳ ದಾಳಿಯಿಂದ ಗಾಯಗೊಂಡವರನ್ನು ನರಸಂಪೇಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.. ಜೇನುನೊಣಗಳು ಹೋದ ನಂತರ ಕೆಲ ಸಂಬಂಧಿಕಷ್ಟೇ ಬಂದು ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ..

 

Share Post