DistrictsLifestyle

ಜನರನ್ನು ನೋಡಿ ದಿಕ್ಕಾಪಾಲಾಗಿ ಓಡಿದ ಹಳ್ಳಿಕಾರ್‌ ಎತ್ತುಗಳು!

ಚಿಕ್ಕಬಳ್ಳಾಪುರ; ಸಂಕ್ರಾಂತಿ ಹಬ್ಬದ ದಿನ ಗ್ರಾಮೀಣ ಪ್ರದೇಶದ ಜನರು ಎತ್ತಿನ ಬಂಡಿ ಓಟ, ಎತ್ತುಗಳ ಕಿಚ್ಚು ಹಾಯಿಸೋದು ಸೇರಿದಂತೆ ವಿವಿಧ ಆಟಗಳನ್ನು ಆಡುತ್ತಾರೆ. ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಹುದಗೂರು ಗ್ರಾಮದಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆ ಜನರನ್ನು ನೋಡಿ ಬೆದರಿ ಹಳ್ಳಿಕಾರ್‌ ಎತ್ತುಗಳು ದಿಕ್ಕಾಪಾಲಾಗಿ ಓಡಿವೆ.

ಗ್ರಾಮದಲ್ಲಿ ರೈತ ಮಿತ್ರ ಬಳಗದ ವತಿಯಿಂದ ಹಳ್ಳಿಕಾರ್‌ ಎತ್ತುಗಳ ಎತ್ತನ ಬಂಡಿ ಓಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಜೋಡಿ ಎತ್ತುಗಳು ಪಾಲ್ಗೊಂಡಿದ್ದವು. ಈ ವೇಳೆ ಕೆಲವು ಎತ್ತುಗಳು ದಿಕ್ಕಾಪಾಲಾಗಿ ಓಡಿದ್ದರಿಂದ ನೋಡುಗರು ಭಯಭೀತಗೊಂಡಿದ್ದರು. ಆದ್ರೆ ಯಾವುದೇ ಅನಾಹುತ ನಡೆದಿಲ್ಲ.

ಪ್ರಥಮ ಬಹುಮಾನವಾಗಿ 30 ಸಾವಿರ ರೂಪಾಯಿ, ಎರಡನೇ ಬಹುಮಾನವಾಗಿ 20 ಸಾವಿರ ರೂಪಾಯಿ ಹಾಗೂ ಮೂರನೇ ಬಹುಮಾನವಾಗಿ 10 ಸಾವಿರ ರೂಪಾಯಿ ಹಾಗೂ ಟ್ರೋಫಿ, ನಾಲ್ಕನೇ ಬಹುಮಾನವಾಗಿ 5 ಸಾವಿರ ರೂಪಾಯಿ ನೀಡಲಾಯಿತು.

 

Share Post