CrimeDistricts

ಚಾಲಕನ ನಿಯಂತ್ರಣ ಪಲ್ಟಿ ಹೊಡೆದ ಕೆಕೆಆರ್‌ಟಿಸಿ ಬಸ್‌; 8 ಮಂದಿಗೆ ಗಾಯ!

ಕಲಬುರಗಿ; ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್‌ ಪಲ್ಟಿಯಾಗಿದೆ. ಕೆಕೆಆರ್‌ಟಿಸಿಗೆ ಸೇರಿದ ಬಸ್‌ ಕಲಬುರಗಿ ನಗರದ ಹೊರವಲಯದ ನಂದೂರು ಕೈಗಾರಿಕಾ ಪ್ರದೇಶದ ಬಳಿ ಪಲ್ಟಿ ಹೊಡೆದಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯಾದಗಿರಿ ಜಿಲ್ಲೆಯ ಶಹಾಪುರ ಡಿಪೋಗೆ ಸೇರಿದ ಬಸ್‌ ಇದಾಗಿದೆ. ಬಸ್‌ ಕಲಬುರಗಿಯಿಂದ ಯಾದಗಿರಿಗೆ ತೆರಳುತ್ತಿತ್ತು. ಬಸ್‌ ಹೊರಟು ಇನ್ನೂ ಸ್ವಲ್ಪ ಹೊತ್ತೂ ಆಗಿರಲಿಲ್ಲ. ಕಲಬುರಗಿ ನಗರ ಬಿಟ್ಟು ಸ್ವಲ್ಪ ಮುಂದೆ ಹೋದಾಗಲೇ ಚಾಲಕನ ನಿಯಂತ್ರಣ ತಪ್ಪಿದೆ. ಹೀಗಾಗಿ ಅದು ಮಗುಚಿಬಿದ್ದಿದೆ.

ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಕಲಬುರಗಿ ಸಂಚಾರಿ 2 ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share Post