CrimeNational

ಮದುವೆ ಮೆರವಣಿಗೆಯಲ್ಲಿ ಚಾಕು ಇರಿತ; ಸಹೋದರರಿಬ್ಬರ ಹತ್ಯೆ

ಲಖನೌ; ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದ ಮದುವೆ ಮೆರವಣಿಗೆಯಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಇರಿದ್ದಾರೆ. ಇದರಿಂದಾಗಿ ಸಹೋದರರಿಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಖೇತಸರಾಯ್ ಪ್ರದೇಶದಲ್ಲಿ ಈ ಕೃತ್ಯ ಎಸಗಲಾಗಿದೆ. 

ಆರು ಜನರ ಗುಂಪೊಂದು ದಾಳಿ ಮಾಡಿದ್ದು, ಸಹೋದರರಿಬ್ಬರು ಮೇಲೆ ಚಾಕುವಿನಿಂದ ದಾಳಿ ಮಾಡಲಾಗಿದೆ. ಮಂಗಳವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಮದುವೆಯ ಮೆರವಣಿಗೆ ಖೇತಸರಾಯ್ ಪಟ್ಟಣಕ್ಕೆ ಆಗಮಿಸುತ್ತಿದಂತೆ ಈ ಘಟನೆ ನಡೆದಿದೆ. ಮದ್ಯಪಾನ ಮಾಡುವಂತೆ ಇಬ್ಬರು ಸಹೋದರರಿಗೆ ಒತ್ತಾಯ ಮಾಡಿದ್ದಾರೆ. ಈ ವೇಳೆ ಜಗಳ ನಡೆದಿದ್ದು, ವಿಕೋಪಕ್ಕೆ ತಿರುಗಿ ಆರು ಮಂದಿ ಸೇರಿ ಇಬ್ಬರು ಸಹೋದರರನ್ನು ಹತ್ಯೆಗೈದಿದ್ದಾರೆ.

ಅಜಯ್ ಪ್ರಜಾಪತಿ (23) ಮತ್ತು ಅವರ ಸಹೋದರ ಅಂಕಿತ್ (20) ಹತ್ಯೆಯಾದವರು ಎಂದು ತಿಳಿದುಬಂದಿದೆ. ಎಲ್ಲಾ ಆರೂ ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

 

Share Post