CrimeDistricts

ತುಮಕೂರಿನಲ್ಲಿ ಸರಣಿ ಅಪಘಾತ; 3 ವಾಹನಕ್ಕೆ ಗುದ್ದಿದ ಶಾಸಕರಿಗೆ ಸೇರಿದ ಕಾರು

ತುಮಕೂರು; ತುಮಕೂರು ನಗರದಲ್ಲಿ ಸರಣಿ ಅಪಘಾತವಾಗಿದೆ. ಇಲ್ಲಿ ಡಾ.ಶಿವಕುಮಾರಸ್ವಾಮೀಜಿ ಸರ್ಕಲ್‌ ಬಳಿ ಕಾರೋಮದು ನಿಂತಿದ್ದ ಎರಡು ಹಾಗೂ ಸರ್ಕಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಸ್ಯಾಂಟ್ರೋ ಕಾರು ಗುಬ್ಬಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅವರಿಗೆ ಸೇರಿದ್ದು ಎಂದು ಹೇಳಲಾಗಿದೆ.

ಕಾರು ಕೋತಿತೋಪು ಕಡೆಯಿಂದ ಶಾಸಕ ಶ್ರೀನಿವಾಸ್‌ ಅವರ ಮನೆ ಕಡೆ ಬರುತ್ತಿತ್ತು. ಈ ವೇಳೆ ಈ ಸರಣಿ ಅಪಘಾತ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ತುಮಕೂರಿನ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದಲ್ಲಿ ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Share Post