BengaluruSports

ನಾಳೆ ವಿಶ್ವಕಪ್‌ ಫೈನಲ್‌ ಪಂದ್ಯ; ಚಿನ್ನದ ಟ್ರೋಫಿ ತಯಾರಿಸಿ ಶುಭ ಕೋರಿದ ಜ್ಯುವೆಲರಿ ಮಾಲೀಕ

ಬೆಂಗಳೂರು; ನಾಳೆ ವಿಶ್ವಕಪ್‌ ಫೈನಲ್‌ ಪಂದ್ಯ ನಡೆಯಲಿದೆ. ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವೆ ಫೈನಲ್‌ ಪಂದ್ಯ ಇದೆ. ಭಾರತ ಗೆಲ್ಲಲೆಂದು ಎಲ್ಲೆಡೆ ಪ್ರಾರ್ಥಿಸಲಾಗುತ್ತಿದೆ. ಈ ನಡುವೆ ಬೆಂಗಳೂರಿನ ಜುವೆಲರಿ ಮಾಲೀಕರೊಬ್ಬರು ವಿನೂತನ ರೀತಿಯಲ್ಲಿ ಟೀಂ ಇಂಡಿಯಾಗೆ ಹಾರೈಸಿದ್ದಾರೆ. 

ಗಾಯತ್ರಿ ನಗರದ ಜುವೆಲರಿ ಅಂಗಡಿ ಮಾಲೀಕರೊಬ್ಬರು, ಭಾರತ ಗೆಲವು ಸಾಧಿಸುವಂತೆ ಬಂಗಾರದಲ್ಲಿ ಟ್ರೋಫಿ ಸಿದ್ಧಪಡಿಸಿ ಶುಭ ಕೋರಿದ್ದಾರೆ.  ಮೂರು ವಿಶ್ವಕಪ್ ಟ್ರೋಫಿಗಳನ್ನು ಚಿನ್ನದಲ್ಲಿ ತಯಾರಿಸಿದ್ದು, ಮೂರನೇ ವಿಶ್ವಕಪ್ ಟ್ರೋಫಿಗೆ ALL THE BEST INDIA ಅಂತಾ ಶುಭಾಷಯ ಕೋರಿದ್ದಾರೆ.

 

Share Post