BengaluruPolitics

ನಮ್ಮ ಜೊತೆ 40-45 ಮಂದಿ ಸಂಪರ್ಕದಲ್ಲಿದ್ದಾರೆ; ಬಿ.ಎಲ್‌.ಸಂತೋಷ್‌ ಹೊಸ ಬಾಂಬ್‌

ಬೆಂಗಳೂರು; ಬಿಜೆಪಿಯಿಂದ ಕಾಂಗ್ರೆಸ್‌ಗೆ ಯಾರೂ ಹೋಗೋದಿಲ್ಲ. ಬೇರೆ ಪಕ್ಷದವರೇ ನಮ್ಮ ಜೊತೆ 40-45 ಮಂದಿ ಸಂಪರ್ಕದಲ್ಲಿದ್ದಾರೆ. ದೆಹಲಿಯಿಂದ ಒಪ್ಪಿಗೆ ಸಿಕ್ಕರೆ ಅವರನ್ನು ಕರೆತರೋದು ನಾಳೆ ಒಂದು ದಿನದ ಕೆಲಸ ಅಷ್ಟೇ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಬಾಂಬ್‌ ಸಿಡಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿರುವ ಅವರು, ಬೇರೆ ಪಕ್ಷದದಿಂದ ಕರೆತರೋಕೆ ಜಾಸ್ತಿ ಸಮಯ ಬೇಕಾಗಿಲ್ಲ. ಆದ್ರೆ ನಮಗೆ ಈಗ ಬೇಡ. ನಾವು ಸರ್ಕಾರ ಮಾಡಬೇಕಾಗಿಲ್ಲ ಎಂದು ಹೇಳಿದ್ದಾರೆ.

ಕೆಲವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂದು ಹೇಳುತ್ತಿದ್ದಾರೆ. ಆದ್ರೆ ನನ್ನ ಪ್ರಕಾರ ಯಾರೂ ಹೋಗೋದಿಲ್ಲ. ಒಂದು ವೇಳೆ ಹತ್ತು ಜನ ಹೋದರೂ ಕೂಡಾ ಅದಕ್ಕೆ ಸಮನಾದ ಒಬ್ಬರನ್ನು ಕರೆತರಬಹುದು ಎಂದು ಬಿ.ಎಲ್.‌ಸಂತೋಷ್‌ ಹೇಳಿದ್ದಾರೆ.

Share Post