CrimeNational

ಮಧುರೈನಲ್ಲಿ ರೈಲಿಗೆ ಬೆಂಕಿ; ಉತ್ತರ ಪ್ರದೇಶದ 9 ಮಂದಿ ದುರ್ಮರಣ

ಮಧುರೈ; ತಮಿಳುನಾಡಿನ ಮಧುರೈ ರೈಲು ನಿಲ್ದಾಣದ ಬಳಿ ರೈಲಿಗೆ ಬೆಂಕಿ ಹೊತ್ತಿಕೊಂಡು 9 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಆಗಸ್ಟ್ 17 ರಂದು 60 ಕ್ಕೂ ಹೆಚ್ಚು ಯಾತ್ರಿಕರು ಲಕ್ನೋದಿಂದ ಪ್ರವಾಸ ಹೊರಟಿದ್ದರು. ಶನಿವಾರ ಬೆಳಗ್ಗೆ ಯಾತ್ರಿಕರು ಮಧುರೈ ತಲುಪಿದರು.

ಮಧುರೈ ರೈಲು ನಿಲ್ದಾಣದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ರೈಲನ್ನು ನಿಲ್ಲಿಸಿದ ಸಂದರ್ಭದಲ್ಲಿ ಕೋಚ್‌ಗೆ ಬೆಂಕಿ ಹೊತ್ತಿಕೊಂಡಿದೆ. ರೈಲಿನಲ್ಲಿದ್ದ ಕೆಲವು ಯಾತ್ರಾರ್ಥಿಗಳು ಸಿಲಿಂಡರ್‌ ಮೇ ಟೀ ತಯಾರಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ರೈಲು ಕೋಚ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಶುಕ್ರವಾರ ನಾಗರಕೋಯಿಲ್‌ನಲ್ಲಿರುವ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅನಂತರ ಅವರು ಮಧುರೈಗೆ ಬಂದಿದ್ದರು.

 

Share Post