BengaluruCrimeDistricts

ಪ್ರಿಯತಮೆಯನ್ನು ಆಕೆಯ ತಂದೆಯೇ ಕೊಂದ; ಪ್ರಿಯಕರ ರೈಲಿಗೆ ತಲೆ ಕೊಟ್ಟ!

ಕೋಲಾರ; ಅನ್ಯಜಾತಿಯವನನ್ನು ಪ್ರೀತಿಸಿದಳು ಎಂಬ ಕಾರಣಕ್ಕೆ ಸ್ವಂತ ತಂದೆಯೇ ಮಗಳನ್ನು ಕತ್ತು ಹಿಸುಕಿ ಕೊಂಡು, ನಂತರ ನೇಣಿಗೆ ಹಾಕಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ನಡೆದಿದೆ. ಈ ವಿಷಯ ತಿಳಿದ ಪ್ರಿಯಕರ ಮನನೊಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಂಗಾರಪೇಟೆ ನಿವಾಸಿ ಕೃಷ್ಣಮೂರ್ತಿ ಎಂಬಾತನೇ ಸ್ವಂತ ಮಗಳನ್ನು ಕೊಂದ ಪಾಪಿ. ಕೃಷ್ಣಮೂರ್ತಿ ಮಗಳು ಕೀರ್ತಿ ಅನ್ಯಜಾತಿಯ ಗಂಗಾಧರ್‌ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಂದೆ ಕೃಷ್ಣಮೂರ್ತಿಗೆ ತಿಳಿದಿದೆ. ಆಗ ಕೃಷ್ಣಮೂರ್ತಿ ಮಗಳೊಂದಿಗೆ ಜಗಳವಾಡಿದ್ದಾರೆ. ಬುದ್ಧಿವಾದ ಹೇಳಿದ್ದಾರೆ. ಆದ್ರೆ ಮಗಳು ಕೀರ್ತಿ ಮದುವೆಯಾಗುವುದಾದರೆ ಗಂಗಾಧರ್‌ನನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾಳೆ. ಇದರಿಂದ ಕುಪಿತಗೊಂಡ ಕೃಷ್ಣಮೂರ್ತಿ ಮಗಳನ್ನು ಕತ್ತುಹಿಸುಕಿ ಕೊಂದು  ನೇಣು ಹಾಕಿದ್ದಾನೆ. ಮಗಳ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದ್ದಾಳೆ.

ಈ ವಿಚಾರ ತಿಳಿಯುತ್ತಿದ್ದಂತೆ ಮನನೊಂದ ಪ್ರಿಯಕರ ಗಂಗಾಧರ್‌, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಗಾಧರ್‌ ಮನೆಕಟ್ಟುವ ಮೇಸ್ತ್ರಿ ಕೆಲಸ ಮಾಡುತಿದ್ದ ಎಂದು ತಿಳಿದುಬಂದಿದೆ. ಆರೋಪಿ ಕೃಷ್ಣಮೂರ್ತಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Share Post