BengaluruPolitics

ನಾನು ಕಾಂಗ್ರೆಸ್‌ ಪಕ್ಷದ ಚೇಲಾ, ವ್ಯಕ್ತಿಯ ಚೇಲಾ ಅಲ್ಲ; ಎಂ.ಬಿ.ಪಾಟೀಲ್‌

ಬೆಂಗಳೂರು; ನಾನು ಕಾಂಗ್ರೆಸ್‌ ಪಕ್ಷದ ಚೇಲಾ, ಬೇರೆ ಯಾರಿಗೂ ಚೇಲಾ ಅಲ್ಲ ಎನ್ನುವ ಮೂಲಕ ಸಂಸದ ಪ್ರತಾಪ ಸಿಂಹಗೆ ಸಚಿವ ಎಂ.ಬಿ.ಪಾಟೀಲ್‌ ತಿರುಗೇಟು ನೀಡಿದ್ದಾರೆ. ನಿನ್ನೆ ಪ್ರತಾಪ ಸಿಂಹ ಅವರು ಎಂ.ಬಿ.ಪಾಟೀಲ್‌ ವಿರುದ್ಧ ಕಿಡಿ ಕಾರಿದ್ದರು. ಎಂ.ಬಿ.ಪಾಟೀಲ್‌ ಅವರು ಸಿದ್ದರಾಮಯ್ಯ ಅವರ ಚೇಲಾ ಎಂದು ಲೇವಡಿ ಮಾಡಿದ್ದರು. ಇದಕ್ಕೆ ಸಚಿವ ಎಂ.ಬಿ.ಪಾಟೀಲ್‌ ಪ್ರತಿಕ್ರಿಯಿಸಿದ್ದಾರೆ.

ನಾನು ಕಾಂಗ್ರೆಸ್‌ ಪಕ್ಷದ ಚೇಲಾ. ನನ್ನ ಹೆಗಲ ಮೇಲೆ ಯಾರೂ ಬಂದೂಕು ಇಟ್ಟು ಹೊಡೆಯಬೇಕಿಲ್ಲ. ನಾನು ಸಿದ್ದರಾಮಯ್ಯ ಅವರಿಗಿಂತ ಮೊದಲೇ ಕಾಂಗ್ರೆಸ್‌ ಪಕ್ಷದಲ್ಲಿದ್ದವನು ಎಂದು ಎಂ.ಬಿ.ಪಾಟೀಲ್‌ ಇದೇ ವೇಳೆ ಹೇಳಿದ್ದಾರೆ. ನಾನು ಆರು ಬಾರಿ ಶಾಸಕನಾಗಿದೇನೆ. ಒಂದು ಬಾರಿ ಸಂಸದನಾಗಿದ್ದೇನೆ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಪ್ರತಾಪ ಸಿಂಹ ಅವರಿಗಿಲ್ಲ ಎಂದು ಎಂ.ಬಿ,.ಪಾಟೀಲ್‌ ಇದೇ ವೇಳೆ ಹೇಳಿದ್ದಾರೆ.

Share Post