CrimeNational

ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಐದು ಮಂದಿ ದುರ್ಮರಣ

ಇಂಫಾಲ್‌; ಮಣಿಪುರದಲ್ಲಿ ಮತ್ತೆ ಹಿಂಸಾಚಾರ ನಡೆದಿದೆ. ಕೆಲ ದಿನಗಳ ಹಿಂದೆ ಮಣಿಪುರದಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ಆಗ ಹಲವು ಸಾವನ್ನಪ್ಪಿದ್ದರು. ಕೆಲದಿನಗಳ ನಂತರ ಸಹಜ ಸ್ಥಿತಿಗೆ ತಲುಪಿತ್ತು. ಆದ್ರೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಗೆ ಕೆಲವೇ ಗಂಟೆಗಳ ಮೊದಲು ಮತ್ತೆ ಹಿಂಸಾಚಾರ ನಡೆದಿದೆ. ಸುಮಾರು ಐದು ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಸುಮಾರು 12 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕಳೆದ ಒಂದು ತಿಂಗಳಿಂದ ಹಿಂಸಾಚಾರಗಳು ನಡೆದಿದ್ದು, ಇದವರೆಗೆ ಹಿಂಸಾಚಾರಕ್ಕೆ ಸಿಲುಕಿ ಎಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆಯಷ್ಟೇ ಸಿಎಂ ಎನ್‌. ಬಿರೇನ್‌ ಸಿಂಗ್‌ ನಾಗರಿಕರ ವಿರುದ್ಧ ಶಸ್ತ್ರಾಸ್ತ್ರ ಬಳಸಿದ 40 ಭಯೋತ್ಪಾದಕರನ್ನ ಹತ್ಯೆ ಮಾಡಲಾಗಿದೆ ಎಂದಿದ್ದರು. ಹೀಗಿರುವಾಗಲೇ ಮತ್ತೆ ಗಲಭೆಗಳು ನಡೆದಿವೆ.

 

Share Post