BengaluruPolitics

ಹೊಸಬರಿಗೆ ಟಿಕೆಟ್‌ ಕೊಟ್ಟಿದ್ದೇ ಬಿಜೆಪಿಗೆ ಮುಳುವಾಯ್ತಾ.?; 75ರಲ್ಲಿ 19 ಮಾತ್ರ ಗೆಲುವು..!

ಬೆಂಗಳೂರು; ಉತ್ತರ ಪ್ರದೇಶ, ಗುಜರಾತ್‌ ರೀತಿಯಲ್ಲಿ ಬಿಜೆಪಿ ಹೈಕಮಾಂಡ್‌ ಕರ್ನಾಟಕದಲ್ಲಿ ಕೂಡಾ ಹೊಸಬರಿಗೆ ಮಣೆ ಹಾಕಿತ್ತು. ಹಿರಿಯರಿಗೆ ಟಿಕೆಟ್‌ ನಿರಾಕರಿಸಿ ಹಲವು ಹೊಸ ಮುಖಗಳನ್ನು ಪರಿಚಯಿಸಲಾಗಿತ್ತು. ಆದ್ರೆ, ಬಿಜೆಪಿ ಹೈಕಮಾಂಡ್‌ ಬಳಸಿದ ಈ ಅಸ್ತ್ರದಿಂದ ಪ್ರಯೋಜವಾಗಿಲ್ಲ. ಹೊಸ ಮುಖಗಳೇ ಹೆಚ್ಚು ಸೋತಿದ್ದಾರೆ. ಬಿಜೆಪಿ ಹೀನಾಯ ಸೋಲಿಗೆ ಹೊಸಮುಖ ಕಾರಣವಾದಂತೆ ಕಾಣುತ್ತಿದೆ.

ಈ ಬಾರಿ 75 ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕಟ್‌ ನೀಡಲಾಗಿತ್ತು. ಆದ್ರೆ ಅದರಲ್ಲಿ 19 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದ 56 ಕ್ಷೇತ್ರಗಳಲ್ಲಿ ಸೋಲನುಭವಿಸಿದೆ.

ಹೊಸದಾಗಿ ಗೆದ್ದ ಬಿಜೆಪಿ 19 ಶಾಸಕರು ಯಾರು..?

ಮಹದೇವಪುರ – ಮಂಜುಳ ಲಿಂಬಾವಳಿ

ಹುಬ್ಬಳ್ಳಿ-ಧಾರವಾಡ ಕೇಂದ್ರ – ಮಹೇಶ್ ಟೆಂಗಿನಕಾಯಿ

ಹುಕ್ಕೇರಿ – ನಿಖಿಲ್ ಕತ್ತಿ

ಖಾನಾಪುರ – ವಿಠಲ್ ಹಲಗೇಕರ್

ಬೈಂದೂರು – ಗುರುರಾಜ್ ಗಂಟಿಹೊಳ

ಕಾಪು – ಗುರ್ಮೆ ಸುರೇಶ್ ಶೆಟ್ಟಿ

ಕುಂದಾಪುರ – ಕಿರಣ್ ಕುಮಾರ್ ಕೊಡ್ಗಿ

ಉಡುಪಿ – ಯಶಪಾಲ್ ಸುವರ್ಣ

ಬೇಲೂರು – ಹುಲ್ಲಳ್ಳಿ ಸುರೇಶ್

ಸಕಲೇಶಪುರ – ಸಿಮೆಂಟ್ ಮಂಜು

ಸುಳ್ಯ – ಭಾಗೀರಥಿ ಮುರುಳ್ಯ

ಶಿಕಾರಿಪುರ – ಬಿ.ವೈ. ವಿಜಯೇಂದ್ರ

ಕೃಷ್ಣರಾಜ – ಟಿ.ಎ. ಶ್ರೀವತ್ಸ

ದೊಡ್ಡಬಳ್ಳಾಪುರ – ಧೀರಜ್ ಮುನಿರಾಜು

ಜಮಖಂಡಿ – ಜಗದೀಶ್ ಗುಡಗಂಟಿ

ಶಿರಹಟ್ಟಿ – ಡಾ.ಚಂದ್ರು ಲಮಾಣಿ

ಶಿವಮೊಗ್ಗ ನಗರ- ಚನ್ನಬಸಪ್ಪ

ಹುಮ್ನಾಬಾದ್ – ಸಿದ್ದು ಪಾಟೀಲ್

Share Post