DistrictsPolitics

ಕಿಚ್ಚನ ವಿರುದ್ಧ ಮಾತು; ಗರಂ ಆದ ಅಭಿಮಾನಿಗಳು

ಬೆಂಗಳೂರು; ನಮ್ಮಲ್ಲಿ ಯಾರೇ ಬಂದರೂ ಊಟ ಮಾಡ್ಕೊಂಡು ಜೇಬಿಗೆ ಹಾಕ್ಕೊಂಡು ಹೋಗ್ತಾ ಇರ್ತಾರೆ ಎಂದು ಸುದೀಪ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಶಾಸಕ ನಂಜುಂಡಸ್ವಾಮಿ ಪುತ್ರನ ವಿರುದ್ಧ ಕಿಚ್ಚನ ಅಭಿಮಾನಿಗಳು ಗರಂ ಆಗಿದ್ದಾರೆ.

ನಂಜುಂಡಸ್ವಾಮಿಯವರು ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಎನ್‌.ಮಹೇಶ್‌ ಕಣದಲ್ಲಿದ್ದಾರೆ. ಮಹೇಶ್‌ ಅವರು ಪ್ರಚಾರಕ್ಕೆ ಸುದೀಪ್‌ ಬರ್ತಾರೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಟಾಂಗ್‌ ಕೊಡಲು ಮಾತನಾಡಿರುವ ನಂಜುಂಡಸ್ವಾಮಿ ಪುತ್ರ ಲೋಕೇಶ್‌, ನಮ್ಮಲ್ಲಿ ಯಾರೇ ಬಂದರೂ ಊಟ ಮಾಡ್ಕೊಂಡು ಜೇಬಿಗೆ ಹಾಕ್ಕೊಂಡು ಹೋಗ್ತಾರೆ ಎಂದು ಹೇಳಿದ್ದಾರೆ.

ಈ ವಿಡಿಯೋ ಈಗ ಎಲ್ಲಡೆ ಹರಿದಾಡುತ್ತಿದೆ. ಇದನ್ನು ನೋಡಿ ಕಿಚ್ಚನ ಅಭಿಮಾನಿಗಳ ಫುಲ್‌ ರಾಂಗ್‌ ಆಗಿದ್ದಾರೆ. ಖುಡಲೇ ಲೋಕೇಶ್‌ ಅವರು ಕಿಚ್ಚನ ಕ್ಷಮೆ ಕೇಳಬೇಕು ಎಂದು ಆಗ್ರಹ ಮಾಡಿದ್ದಾರೆ.

Share Post