BengaluruPoliticsUncategorized

ಶೆಟ್ಟರ್‌ ಪಕ್ಷ ಬಿಟ್ಟಿದ್ದು ಅಕ್ಷಮ್ಯ ಅಪರಾಧ; ಯಡಿಯೂರಪ್ಪ ಕೆಂಡ

 

ಬೆಂಗಳೂರು; ಜಗದೀಶ್‌ ಶೆಟ್ಟರ್‌ ಅವರಿಗೆ ನಾವೇನೂ ಕಡಿಮೆ ಮಾಡಿರಲಿಲ್ಲ. ಎಲ್ಲಾ ಹುದ್ದೆಗಳನ್ನೂ ಕೊಟ್ಟಿದ್ದೆವು. ಆದ್ರೆ ಈಗ ಅವರು ಕಾಂಗ್ರೆಸ್‌ ಸೇರ್ಪಡೆಗೆ ಮುಂದಾಗಿರುವುದು ಅಕ್ಷಮ್ಯ ಅಪರಾಧ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ ಅವರು ಜಗದೀಶ್‌ ಶೆಟ್ಟರ್‌ ವಿರುದ್ಧ ಕೆಂಡಕಾರಿದರು.

ಹಳೇಬೇರು ಹೊಸ ಚಿಗುರು ಸೇರಿ ಪಕ್ಷ ಬೆಳೆಸಬೇಕು. ಶೆಟ್ಟರ್‌ ಜನಸಂಘದ ಕಾಲದಿಂದಲೂ ಬಿಜೆಪಿಯಲ್ಲಿದ್ದರು. ಆದ್ರೆ ಈಗ ವೈಯಕ್ತಿಕ ಅನುಕೂಲಕ್ಕಾಗಿ ಪಕ್ಷ ಬಿಡುತ್ತಿದ್ದಾರೆ. ಅವರ ಕುಟುಂಬದಲ್ಲಿ ಯಾರಿಗೆ ಹೇಳಿದರೂ ಟಿಕೆಟ್‌ ಕೊಡುತ್ತೇವೆ ಎಂದು ಹೇಳಿದ್ದೆವು. ಆದ್ರೆ ಶೆಟ್ಟರ್‌ ಅದಕ್ಕೆ ಒಪ್ಪಲಿಲ್ಲ. ಕೇಂದ್ರದಲ್ಲಿ ಹುದ್ದೆಗಳನ್ನು ನೀಡುತ್ತೇವೆ ಎಂದೂ ಆಶ್ವಾಸನೆ ನೀಡಿದ್ದೆವು. ಆದ್ರೆ ಅದನ್ನು ಶೆಟ್ಟರ್‌ ಒಪ್ಪಲಿಲ್ಲ. ಅವರ ಈ ನಡೆಯನ್ನು ಉತ್ತರ ಕರ್ನಾಟಕ ಭಾಗದ ಜನ ಕ್ಷಮಿಸೋದಿಲ್ಲ. ಜನಕ್ಕೆ ವಾಸ್ತವ ಏನಿದೆ ಎಂಬುದನ್ನು ಅರ್ಥ ಮಾಡಿಸುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದರು.

 

Share Post