BengaluruPolitics

ಬಿಜೆಪಿ, ಕಾಂಗ್ರೆಸ್‌ ನಾಯಕರು ನಮ್ಮ ಸಂಪರ್ಕ ಮಾಡಿದ್ದಾರೆ; ಹೆಚ್ಡಿಕೆ

ಬೆಂಗಳೂರು; ಕಾಂಗ್ರೆಸ್‌ ಹಾಗೂ ಬಿಜೆಪಿಯ ರಾಜ್ಯ ನಾಯಕರು ಜೆಡಿಎಸ್‌ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಆದ್ರೆ ಎರಡೂ ಪಕ್ಷದ ಕೇಂದ್ರ ನಾಯಕರು ನನ್ನನ್ನು ಸಂಪರ್ಕಿಸುತ್ತಿದ್ದಾರೆ. ನನ್ನ ಜೊತೆ ಮಾತನಾಡುತ್ತಿದ್ದಾರೆ ಎಂದು ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ಬರುವ ಮುನ್ಸೂಚನೆ ಸಿಕ್ಕಿದಂತೆ ಕಾಣುತ್ತಿದೆ ಎಂಬುದನ್ನು ಹೆಚ್ಡಿಕೆ ಬಹಿರಂಗ ಮಾಡಿದ್ದಾರೆ.

ಇವರು ಹೊರಗೆ ಹೇಳೊದೇ ಬೇರೆ, ಒಳಗಿರೋದೇ ಬೇರೆ. ಜೆಡಿಎಸ್‌ ಮುಗಿಬಿಡ್ತೀವಿ ಅಂತಾರೆ, ನಂತರ ನಮ್ಮ ಹತ್ತಿರಕ್ಕೇ ಬರುತ್ತಾರೆ. ಈಗಲೂ ಎರಡೂ ಪಕ್ಷದ ವರಿಷ್ಠ ನಾಯಕರು ನನ್ನನ್ನು ಸಂಪರ್ಕಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Share Post