Districts

ಸೇತುವೆ ಮೇಲೆ ಕಾಣಿಸಿಕೊಂಡ ಬೃಹತ್‌ ಮೊಸಳೆ; ದಾರಿಹೋಕರಿಗೆ ಆತಂಕ

ವಿಜಯಪುರ; ಕೃಷ್ಣಾ ನದಿ ಸೇತುವೆ ಮೇಲೆ ಬೃಹತ್‌ ಮೊಸಳೆ ಕಾಣಿಸಿಕೊಂಡಿದೆ. ಕೊಲ್ಹಾರ ಪಟ್ಟಣ ಹೊರವಲಯದಲ್ಲಿ ಮೊಸಳೆ ಪತ್ತೆಯಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ 218 ರ ಕೃಷ್ಣಾ ನದಿ ಸೇತುವೆ ಮೇಲೆ ಇಂದು ಬೆಳಗ್ಗೆ ಬಾಯಿಗೆ ಹಗ್ಗ ಕಟ್ಟಿದ್ದ ಸ್ಥಿತಿಯಲ್ಲಿ ಮೊಸಳೆ ಪತ್ತೆಯಾಗಿದೆ.

ಹೇಗೋ ಬಾಯಿಗೆ ಹಗ್ಗ ಬಿಗಿದ್ದಿದ್ದು, ಆಹಾರ ತಿನ್ನಲಾಗದೇ ಮೊಸಳೆ ನದಿಯಿಂದ ಆಚೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಇಲ್ಲವೇ ಜನವಸತಿ ಪ್ರದೇಶಕ್ಕೆ ಬಂದಿದ್ದ ಮೊಸಳೆಯ ಮೂತಿ ಕಟ್ಟಿ ಇಲ್ಲಿ ತಂದು ಬಿಟ್ಟಿರಬಹುದು ಎಂದು ಅನುಮಾನಿಸಲಾಗಿದೆ. ಸ್ಥಳಕ್ಕೆ ಹೆದ್ದಾರಿ ಗಸ್ತು ಪೊಲೀಸರು ಆಗಮಿಸಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಸಿಬ್ಬಂದಿ ಮೊಸಳೆಯನ್ನು ರಕ್ಷಿಸಿ ನೀರಿಗೆ ಬಿಟ್ಟಿದ್ದಾರೆ.

Share Post