BengaluruCinema

ನಟ ರಕ್ಷಿತ್‌ ಶೆಟ್ಟಿ ಯಾರಿಗೂ ಕಾಣಿಸ್ತಿಲ್ಲ ಯಾಕೆ..?; ಯಾಕೆ ಹಿಂಗಾದ್ರು ಚಾರ್ಲಿ ಹೀರೋ..?

ಬೆಂಗಳೂರು; ನಟ ರಕ್ಷಿತ್‌ ಶೆಟ್ಟಿ ಹಲವು ದಿನಗಳಿಂದ ಯಾರಿಗೂ ಕಾಣಿಸಿಕೊಳ್ಳುತ್ತಿಲ್ಲ. ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಿಲ್ಲ. ಹೊರಗಡೆಗೂ ಬರುತ್ತಿಲ್ಲ. ಹೀಗಾಗಿ ರಕ್ಷತ್‌ ಶೆಟ್ಟಿ ಎಲ್ಲಿ ಹೋದರು ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಉಂಟಾಗಿದೆ. ಯಾಕಂದ್ರೆ ಚಾರ್ಲಿ 777 ಸಿನಿಮಾ ರಿಲೀಸ್‌ ನಂತರ ರಕ್ಷತ್‌ ಶೆಟ್ಟಿಯವರು ಸಾರ್ವಜನಿಕವಾಗು ಕಾಣಿಸಿಕೊಂಡೇ ಇಲ್ಲ. ಮಾಧ್ಯಮಗಳ ಮುಂದೆಯೂ ಬಂದಿಲ್ಲ.

ಆದ್ರೆ ಇದಕ್ಕೆ ಕಾರಣವೂ ಇಲ್ಲದೇ ಇಲ್ಲ. ಯಾಕಂದ್ರೆ ಅವರು ಹೊಸ ಸಿನಿಮಾವೊಂದಕ್ಕೆ ರೆಡಿಯಾಗುತ್ತಿದ್ದಾರೆ. ಹೀಗಾಗಿ ಅವರು ಯಾರ ಕಣ್ಣಿಗೂ ಕಾಣುತ್ತಿಲ್ಲ. ಇತ್ತೀಚೆಗೆ ಅವರು ದೇವಸ್ಥಾನವೊಂದಕ್ಕೆ ಭೇಟಿ ಕೊಟ್ಟಿದ್ದರು. ಆದ್ರೆ ಆಗಲೂ ಅವ್ರು ಕ್ಯಾಮರಾಗಳಿಂದ ದೂರವೇ ಉಳಿದಿದ್ದರು. ಹೀಗೆ ಅಂತರ ಕಾಯ್ದುಕೊಳ್ಳುವುದಕ್ಕೂ ಒಂದು ಕಾರಣವಿದೆಯಂತೆ. ಮುಂದಿನ ಸಿನಿಮಾಗಾಗಿ ರಕ್ಷಿತ್‌ ಶೆಟ್ಟಿ ಹೇರ್ ಸ್ಟೈಲ್ ಮತ್ತು ಬಾಡಿ ಶೇಪ್ ಬದಲಾಯಿಸಿಕೊಂಡಿದ್ದಾರಂತೆ. ಅದು ಯಾರಿಗೂ ಗೊತ್ತಾಗದಿರಲಿ ಅಂತ ಜನರಿಂದ ದೂರವಿದ್ದಾರಂತೆ.

ರಕ್ಷಿತ್ ಶೆಟ್ಟಿ ಅವರು ಸಪ್ತ ಸಾಗರದಾಚೆ ಎಲ್ಲೋ ಎಂಬ ಸಿನಿಮಾ ಕೆಲಸದಲ್ಲಿ ತೊಡಗಿದ್ದಾರೆ. ಇದು ಮುಗಿದ ತಕ್ಷಣವೇ ಬಿಗ್‌ ಬಜೆಟ್‌ ಮೂವಿ ಒಂದು ಸೆಟ್ಟೇರಲಿದೆ. ಹೊಂಬಾಳೆ ಫಿಲ್ಮ್ಸ್‌ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಇದಕ್ಕೆ ಅವರು ನಿರ್ದೇಶನ ಕೂಡಾ ಮಾಡಬೇಕಿದೆ.

Share Post