BengaluruCinema

ಗಾಯಕಿ ಮಂಗ್ಲಿ ನಾಯಕಿಯಾಗುವ ಕನಸು ಭಗ್ನ; ಕನ್ನಡದ ʻಪಾದರಾಯʼನ ಪ್ಲ್ಯಾನ್‌ ಏನು..?

ಬೆಂಗಳೂರು; ತೆಲುಗಿನಲ್ಲಿ ದೊಡ್ಡ ಅಲೆ ಸೃಷ್ಟಿಸಿರುವ ಗಾಯಕಿ ಮಂಗ್ಲಿ ಕನ್ನಡದಲ್ಲೂ ಹಲವು ಹಾಡುಗಳನ್ನು ಹಾಡಿದ್ದಾರೆ. ಅವರು ಕನ್ನಡದಲ್ಲಿ ನಿರ್ಮಾಣವಾಗಲಿರುವ ಪಾದರಾಯ ಚಿತ್ರಕ್ಕೆ ನಾಯಕಿಯಾಗುತ್ತಾರೆಂದು ಘೋಷಿಸಲಾಗಿತ್ತು. ಇದನ್ನು ಮಂಗ್ಲಿ ಕೂಡಾ ಹೇಳಿಕೊಂಡಿದ್ದರು. ಆದ್ರೆ ಅದಕ್ಕೀಗ ಬ್ರೇಕ್‌ ಬಿದ್ದಿದೆ. ಚಿತ್ರದ ನಿರ್ದೇಶಕರು ಚಿತ್ರದಲ್ಲಿ ನಾಯಕ ನಟನಾಗಿ ನಟಿಸಬೇಕಿದ್ದ ನಾಗಶೇಖರ್‌ ವಿರುದ್ಧ ಆರೋಪಗಳನ್ನು ಮಾಡಿರೋದು ಇದಕ್ಕೆ ಕಾರಣ.

ಪಾದರಾಯ ಚಿತ್ರದ ನಿರ್ದೇಶಕ ಡಿ.ಜೆ.ಚಕ್ರವರ್ತಿ ಅವರು ನಾಗಶೇಖರ್‌ ಜೊತೆ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಈ ಸಿನಿಮಾವನ್ನು ಬೇರೆಯವರ ಜೊತೆ ಮಾಡುತ್ತೇನೆ ಎಂದೂ ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನು ಚಿತ್ರದ ನಾಯಕಿಯಾಗಬೇಕಿದ್ದ ಮಂಗ್ಲಿ ಬಗ್ಗೆಯೂ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಚಕ್ರವರ್ತಿ ಹೇಳಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ನಾಗಶೇಖರ್ ಮತ್ತು ಚಕ್ರವರ್ತಿ ನಡುವೆ ಹಲವು ವಿಚಾರವಾಗಿ ವೈಮನಸ್ಯವಾಗಿದೆ. ಈ ಬಗ್ಗೆ ಸ್ವತಃ ಚಕ್ರವರ್ತಿಅವರೇ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದರಲ್ಲಿ ನಾಗಶೇಖರ್‌ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಇದೀಗ ಅವರು ಬೇರೆ ನಿರ್ಮಾಪಕರ ಜೊತೆ ಸೇರಿ ಸಿನಿಮಾ ಮಾಡ್ತೀನಿ ಅಂತಿದ್ದಾರೆ. ಹೀಗಾಗಿ ಮಂಗ್ಲಿ ನಾಯಕಿಯಾಗುವ ಕನಸು ಭಗ್ನವಾಗುವ ಎಲ್ಲಾ ಲಕ್ಷಣಗಳೂ ಕಾಣ್ತಿವೆ.

Share Post