DistrictsPolitics

ಸಿದ್ದರಾಮಯ್ಯ ಮನೆ ದೇವರು ಸೋಲೋ ಮುನ್ಸೂಚನೆ ಕೊಡ್ತಾ..?

ಮಂಡ್ಯ; ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ. ಆದ್ರೆ, ಅವರ ಮನೆ ದೇವತೆ ವ್ಯತಿರಿಕ್ತವಾಗಿ ಭವಿಷ್ಯ ನುಡಿದಿದೆ. ಸಿದ್ದರಾಮಯ್ಯ ಅವರು ಒಂದೇ ಕಡೆ ನಿಂತರೆ ಸೋಲು ಕಟ್ಟಿಟ್ಟ ಬುತ್ತಿ, ಹೀಗಾಗಿ ಎರಡು ಕಡೆ ನಿಲ್ಲಬೇಕು ಎಂದು ಹೇಳಿದೆಯಂತೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಚೊಟ್ಟನಹಳ್ಳಿಯಲ್ಲಿ ಆದಿನಾಡು ಚಿಕ್ಕಮ್ಮ ತಾಯಿ ದೇವಸ್ಥಾನವಿದೆ.. ಇದು ಸಿದ್ದರಾಮಯ್ಯ ಅವರ ಕುಟುಂಬದ ಮೂಲದೇವತೆ. ಸಿದ್ದರಾಮಯ್ಯ ಅವರ ಮಗ ನಿನ್ನೆ ಈ ದೇವಿಯ ದರ್ಶನಕ್ಕೆ ಬಂದಿದ್ದರು. ಈ ವೇಳೆ ದೇಗುಲದ ಪೂಜಾರಿಗೆ ದೇವಿ ಮೈಮೇಲೆ ಬಂದಿದ್ದಾಳೆ. ನಿಮಗೆ ಪ್ರಬಲ ಶಕ್ತಿಗಳ ವಿರೋಧ ಇದೆ. ಒಂದು ಕಡೆ ಬಾಹುಬಲ ಚಾಚಿದ್ರೆ ಆಗೋದಿಲ್ಲ. ಅರ್ಥ ಆಯ್ತೇನಪ್ಪ, ಬಾಹುಬಲ ಎರಡು ಕಡೆ ಚಾಚಬೇಕು ಎಂದು ದೇವಿ ಹೇಳಿದೆ. ಒಂದೇ ಕಡೆ ನಿಂತ್ರೆ ಬಲವಿಲ್ಲ, ಎರಡು ಕ್ಷೇತ್ರದಲ್ಲಿ ನಿಲ್ಲುವಂತೆ ದೇವಿ ಸೂಚನೆ‌ ಸೂಚನೆ ಇದು.

ಒಂದು ಕಡೆ ಚಾಚಿದ್ರೆ ತಪ್ಪಾಗುತ್ತೆ, ಅರ್ಥ ಮಾಡ್ಕೊಳ್ಳಿ. ಎರಡು ಕಡೆ ಚಾಚಿದ್ರೆ ನಾನು ಗೆಲ್ಲಿಸಿಕೊಂಡು ಬರ್ತಿನಿ ಎಂದು ದೇವತೆ ನುಡಿದಿದ್ದಾರಂತೆ. ನಾನು ನಿಮ್ಮ ಮನೆ ದೇವತೆ ಗೊತ್ತಾ..? ನಾನು ಮೂಲದೇವರು, ಅವಕಾಶ ಸಿಕ್ಕಿದ್ರೆ ಯಾವಾಗಾದ್ರು ಬಂದು ನನ್ನ ಆಶೀರ್ವಾದ ತೆಗೆದುಕೊಂಡು ಹೋಗಲು ಹೇಳು ಎಂದು ದೇವತೆ ಹೇಳಿದೆಯಂತೆ.

ಯತೀಂದ್ರ ಸಿದ್ದರಾಮಯ್ಯ ಅವರು ನರೇಂದ್ರ ಸ್ವಾಮಿ ಅವರ ಜೊತೆಗೂಡಿ ದೇಗುಲಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅರ್ಚಕನಿಗೆ ದೇವತೆ ಮೈಮೇಲೆ ಬಂದು ಈ ರೀತಿ ಹೇಳಿದ್ದಾಳೆ. ಆದ್ರೆ ಸಿದ್ದರಾಮಯ್ಯ ಅವರು ಇಂತಹದ್ದನ್ನೆಲ್ಲಾ ನಂಬೋದಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ಮುಂದಿನ ನಿರ್ಧಾರ ಏನು ಅನ್ನೇದೇ ಕುತೂಹಲದ ಸಂಗತಿ.

Share Post