Districts

ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್‌ ಭಾವಚಿತ್ರ ಅನಾವರಣ

ಬೆಳಗಾವಿ; ಇಂದಿನಿಂದ ಬೆಳಗಾವಿ ಅಧಿವೇಶನ ಶುರುವಾಗಿದೆ. ಕಲಾಪ ಶುರುವಾಗುತ್ತಿದ್ದಂತೆ ವಿಧಾನಸಭಾ ಸಭಾಂಗಣದಲ್ಲಿ ಸಾರ್ವಕರ್‌ ಸೇರಿ ಹಲವು ಗಣ್ಯರ ಫೋಟೋಗಳನ್ನು ಅನಾವರಣ ಮಾಡಲಾಯಿತು. ಸ್ಪೀಕರ್‌ ಕಾಗೇರಿ ಹಾಗೂ ಸಿಎಂ ಬೊಮ್ಮಾಯಿ ಫೋಟೋಗಳನ್ನು ಅನಾವರಣ ಮಾಡಿದರು.

ಸ್ವಾಮಿ ವಿವೇಕಾನಂದ, ವಲ್ಲಭಭಾಯ್ ಪಟೇಲ್, ನೆಹರೂ, ಅಂಬೇಡ್ಕರ್, ಬಸವಣ್ಣ, ಗಾಂಧೀಜಿ, ಸಾವರ್ಕರ್ ಫೋಟೋಗಳನ್ನು ಅನಾವರಣ ಮಾಡಲಾಯಿತು. ಸಚಿವರಾದ ಮಾಧುಸ್ವಾಮಿ, ಗೋವಿಂದ ಕಾರಜೋಳ, ಬೈರತಿ ಬಸವರಾಜ್, ನಾರಾಯಣ ಗೌಡ ಉಪಸ್ಥಿತರಿದ್ದರು.

Share Post