CrimeDistricts

ಯುವಕರ ಮೇಲೆ ಕಾರು ಹರಿಸಿದ ಪ್ರಕರಣ; ಆರೋಪಿ ಅರೆಸ್ಟ್‌

ಮೈಸೂರು; ಮೈಸೂರಿನಲ್ಲಿ ಮೊನ್ನೆ ನಡೆದ ಮೂವರು ಯುವಕರ ಮೇಲೆ ಕಾರು ಹರಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಟಿ.ಕೆ.ಲೇಔಟ್‌ನಲ್ಲಿ ನಡೆದ ಕ್ಷುಲ್ಲಕ ಜಗಳದ ಮೇಲೆ ಕಾರು ಚಾಲಕ ಮೂವರು ಯುವಕರ ಮೇಲೆ ಕಾರು ಹತ್ತಿಸಿದ್ದ. ಇದೀಗ ಆರೋಪಿ ದರ್ಶನ್‌ನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಡಿಸೆಂಬರ್‌ 4ರಂದು ಮೈಸೂರಿನ ಟಿಕೆ ಲೇಔಟ್‌ನಲ್ಲಿ ಕಾರಿನಲ್ಲಿ ವೇಗವಾಗಿ ಬಂದ ದರ್ಶನ್‌, ಇಂಡಿಕೇಟರ್‌ ಹಾಕದೇ ಕಾರನ್ನು ವೇಗವಾಗಿ ತಿರುಗಿಸಿದ್ದ. ಈ ವೇಳೆ ರಾಹುಲ್‌, ಪ್ರಜ್ವಲ್‌ ಎಂಬುವವರು ಮತ್ತೊಂದು ಕಾರಿನಲ್ಲಿ ಬರುತ್ತಿದ್ದು, ದರ್ಶನ್‌ ಕಾರು ತಿರುಗಿಸಿದ್ದರಿಂದ ತೊಂದರೆಯಾಗಿದೆ. ಅದನ್ನು ಕಾರು ನಿಲ್ಲಿಸಿ ಪ್ರಶ್ನೆ ಮಾಡಿದ್ದಾರೆ.

ಇದು ಮಾತಿಮಾತು ಬೆಳೆದಿದ್ದು ದೊಡ್ಡ ಜಗಳಕ್ಕೆ ಕಾರಣವಾಗಿದೆ. ಇದೇ ವೇಳೆ ದಾರಿಯಲ್ಲಿ ಹೋಗುತ್ತಿದ್ದ ಆನಂದ್‌ ಎಂಬಾತ ಜಗಳ ಬಿಡಿಸಲು ಬಂದಿದ್ದಾನೆ. ಈ ವೇಳೆ ಕುಪಿತಗೊಂಡಿದ್ದ ದರ್ಶನ್‌, ಮೂವರ ಮೇಲೂ ಕಾರು ಹರಿಸಿ ಪರಾರಿಯಾಗಿದ್ದ.

ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರಿಗೂ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Share Post