DistrictsPolitics

ಕ್ಷೇತ್ರ ಯಾವುದು ಎಂದು ಹೇಳೊ ಧೈರ್ಯ ಸಿದ್ದರಾಮಯ್ಯಗಿಲ್ಲ; ಶ್ರೀನಿವಾಸ ಪ್ರಸಾದ್‌

ಚಾಮರಾಜನಗರ; ಮಾಜಿ ಸಿಎಂ ಸಿದ್ದರಾಮಯ್ಯ ಕೇವಲ ವಿರಾವೇಶದ ಮಾತುಗಳನ್ನಾಡುತ್ತಾರೆ ಅಷ್ಟೇ. ಯಾವ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದು ಹೇಳುವ ಧೈರ್ಯ ಅವರಿಗೆ ಇಲ್ಲವೇ ಇಲ್ಲ ಎಂದು ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್‌ ಲೇವಡಿ ಮಾಡಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತು ಬದಾಮಿಗೆ ಹೋದರು. ಈಗ ಕೋಲಾರ, ಚಾಮರಾಜಪೇಟೆ, ವರುಣಾ ಅಂತ ಹೇಳುತ್ತಿದ್ದಾರೆ. ಆದ್ರೆ ಇಂತಾ ಕ್ಷೇತ್ರದಲ್ಲೇ ನಿಲ್ಲುತ್ತೇನೆ ಎಂದು ಹೇಳೊ ಧೈರ್ಯ ಅವರಿಗೆ ಯಾಕಿಲ್ಲ ಎಂದು ಪ್ರಶ್ನಿಸಿದರು.

ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿ ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಮಣ್ಣು ಮಕ್ಕಿದರು. ಮೋದಿ ಪ್ರಧಾನಿಯಾಗಲ್ಲ ಎಂದು ಹೇಳಿದರು. ಆದ್ರೆ ಏನಾಯ್ತು ಎಂದು ಶ್ರೀನಿವಾಸ ಪ್ರಸಾದ್‌ ಪ್ರಶ್ನಿಸಿದರು. ಎಐಸಿಸಿ ಅಧ್ಯಕ್ಷರಾಗಿ‌ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕರಿಸಿರುವುದರ ಬಗ್ಗೆ ಮಾತನಾಡಿದ ಅವರು, ಎಐಸಿಸಿಯಲ್ಲಿ ಏನಿದೆ..? ಖರ್ಗೆಯವರಿಗೆ ಮರದ ಕತ್ತಿ ಕೊಟ್ಟು ಯುದ್ಧಕ್ಕೆ ಹೋಗು ಎಂದಿದ್ದಾರೆ ಎಂದು ಲೇವಡಿ ಮಾಡಿದರು.

Share Post