CrimeDistricts

ಜಿಲ್ಲಾ ಪಂಚಾಯತ್‌ ನೌಕರನಿಗೆ ಕಪಾಳಮೋಕ್ಷ ಮಾಡಿದ ಉಪವಿಭಾಗಾಧಿಕಾರಿ

ಹಾಸನ; ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ಮಾಡುವ ನೌಕರನಿಗೆ ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್ ಕಪಾಳ ಮೋಕ್ಷ ಮಾಡಿದ್ದಾರೆ. ಈ ಘಟನೆ ನಡೆದಿರೋದು ಹಾಸನಾಂಬೆ ದೇಗುಲದಲ್ಲಿ. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುವ ಶಿವೇಗೌಡರು ತಮ್ಮ ಕುಟುಂಬದೊಂದಿಗೆ ಹಾಸನಾಂಬೆ ದರ್ಶನಕ್ಕೆ ಬಂದಿದ್ದರು. ಈ ವೇಳೆ ದೇಗುಲದ ಗೇಟ್‌ ಬಳಿ ಹಾಸನದ ಉವಿಭಾಗಧಿಕಾರಿ ಜಗದೀಶ್ ಕಪಾಳಮೋಕ್ಷ ಮಾಡಿದ್ದಾರೆ.
ನೂರಾರು ಜನರು ಒಳ ಬರುತ್ತಿದ್ದಾಗ ಅವರ ಜೊತೆಯಲ್ಲಿಯೇ ಶಿವೇಗೌಡರು ಹಾಗೂ ಅವರ ಕುಟುಂಬದವರು ದರ್ಶನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಆದ್ರೆ ಶಿವೇಗೌಡರು, ಸರತಿ ಸಾಲು ಬಿಟ್ಟು ಒಳಗೆ ಬಂದಿದ್ದಾರೆಂದು ಎಸಿ ಜಗದೀಶ್ ಆತನನ್ನು ತಡೆದು, ನಿನಗೆ ಯಾರು ಒಳಬಿಟ್ಟಿದ್ದು ಎಂದು ಬೈದು ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಬಂದಿದೆ. ನಾನು ಸರ್ಕಾರಿ ನೌಕರ ಎಂದು ಕಾರ್ಡ್‌ ತೋರಿಸಿದರೂ, ಅದನ್ನು ಕಿತ್ತೆಸೆದೆ ಎಸಿ ಜಗದೀಶ್‌, ಎಲ್ಲರ ಮುಂದೆ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Share Post