Districts

ಕವಿಗೋಷ್ಠಿಗೆ ಮೃತ ವ್ಯಕ್ತಿಯ ಆಹ್ವಾನ; ಪ್ರತಾಪ ಸಿಂಹ ಚಾಮರಾಜನಗರ ಸಂಸದರಂತೆ..!

ಮೈಸೂರು; ಮೈಸೂರು ದಸರಾ ಹಿನ್ನೆಲೆಯಲ್ಲಿ ಸೋಮವಾರ ಮೈಸೂರಿನಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಈ ಕವಿಗೋಷ್ಠಿಯ ಆಹ್ವಾನಪತ್ರಿಕೆಯಲ್ಲಿ ಎಲ್ಲಾ ತಪ್ಪುಗಳೇ ರಾರಾಜಿಸುತ್ತಿವೆ. ಮೃತ ವ್ಯಕ್ತಿಯೊಬ್ಬ ಹೆಸರು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಅಷ್ಟೇ ಅಲ್ಲ, ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ ಸಿಂಹ ಅವರ ಹೆಸರಿನ ಮುಂದೆ ಚಾಮರಾಜನಗರ ಸಂಸದ ಎಂದು ಪ್ರಕಟಿಸಿ ಎಡವಟ್ಟು ಮಾಡಿಕೊಳ್ಳಲಾಗಿದೆ. 

ಹೌದು, ಆಹ್ವಾನ ಪತ್ರಿಕೆಯಲ್ಲಿ 2019ರಲ್ಲೇ ನಿಧನರಾಗಿದ್ದ ಸಾಹಿತಿ ಹೆಸರು ಪ್ರಕಟ ಮಾಡಲಾಗಿದೆ. ಆಕಾಶವಾಣಿ ನಿಲಯ ನಿರ್ದೇಶಕರು ಹಾಗೂ ಸಾಹಿತಿಯಾಗಿದ್ದ ರವೀಂದ್ರ ಕುಮಾರ್ ಅವರು, 2019ರಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ ಇವರ ಹೆಸರನ್ನು ಕವಿಗೋಷ್ಠಿ ಆಯೋಜಕರು ಮುದ್ರಿಸಿದ್ದಾರೆ. ಪ್ರಮಾದ ಅರಿವಾಗುತ್ತಿದ್ದಂತೆ ದಸರಾ ಸಮಿತಿ ಮತ್ತೊಂದು ಆಹ್ವಾಪತ್ರಿಕೆ ಪ್ರಕಟಿಸಿದೆ. ಆದರೆ ಅದರಲ್ಲೂ ತಪ್ಪು ಕಾಣಿಸಿದೆ.

   ಮರು ಮುದ್ರಣ ಪಟ್ಟಿಯಲ್ಲಿಯೂ ಪ್ರತಾಪ್​ ಸಿಂಹ ಚಾಮರಾಜನಗರ ಸಂಸದ ಎಂದು ಮುದ್ರಣ ಮಾಡಲಾಗಿದೆ. ಸೋಮವಾರ ದಸರಾ ಸಾಹಿತಿಗಳ ಕವಿಗೋಷ್ಠಿ ನಡೆಯಲಿದ್ದು, ನಾಡಿನ ಹೆಸರಾಂತ ಕವಿಗಳು ಭಾಗಿಯಾಗಲಿದ್ದಾರೆ.

Share Post