CrimeNational

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ; ಐದು ಮಂದಿ ಸ್ಥಳದಲ್ಲೇ ಸಾವು..!

ರಾಜಸ್ಥಾನ: ಪಾಲಿಯ ರೋಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಮುಕುನಪುರ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ಭಕ್ತರಿಗೆ ಟ್ರೇಲರ್​ವೊಂದು ಗುದ್ದಿದ್ದು, ಅಪಘಾತದಲ್ಲಿ ಐವರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಪಘಾತದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.

ಭಿಲ್ವಾರಾ ಜಿಲ್ಲೆಯ ರಾಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖೇಮ್ನಾ ಗ್ರಾಮದ ನಿವಾಸಿ ಪಪ್ಪು ಪುತ್ರ ಹೀರಾಲಾಲ್ ಭಿಲ್ ತನ್ನ ಸಹಚರರೊಂದಿಗೆ ಕಾಲ್ನಡಿಗೆಯಲ್ಲಿ ರಾಮ್‌ದೇವ್ರಾಗೆ ಹೋಗುತ್ತಿದ್ದರು ಎಂದು ಸಿಒ ಮಂಗಳೇಶ್ ಚುಂದಾವತ್ ತಿಳಿಸಿದ್ದಾರೆ. ಭಾನುವಾರ ತಡರಾತ್ರಿ ಮುಕನಪುರ ಗ್ರಾಮದ ಹೊರವಲಯದ ರಸ್ತೆಯಲ್ಲಿ ಇವರೆಲ್ಲರು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ, ಹಿಂದಿನಿಂದ ಬಂದ ಟ್ರೇಲರ್ ಅವರಿಗೆ ಡಿಕ್ಕಿ ಹೊಡೆದಿದೆ. ಪಪ್ಪು ಅವರ ಪುತ್ರ ಹೀರಾಲಾಲ್, ಗಿರ್ಧಾರಿ ಅವರ ಪುತ್ರ ರೋಷನ್​ಲಾಲ್, ಪವನ್ ಅವರ ಪುತ್ರ ಲಾಡು ಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪರಾಸ್ ಪುತ್ರ ಕೈಲಾಸ್ ಮತ್ತು ಸುಶೀಲಾ ಪುತ್ರಿ ರತನ್ ಜೋಧ್‌ಪುರದಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ.

Share Post