BengaluruCrime

ಚಲಿಸುತ್ತಿದ್ದ ಬಸ್‌ ಮೇಲೆ ಉರುಳಿದ ಮರ; ಏನಾಯ್ತು ಗೊತ್ತಾ..?

ಬೆಂಗಳೂರು; ಚಲಿಸುತ್ತಿದ್ದ ಬಿಎಂಟಿಸಿ ಬಸ್‌ ಮೇಲೆ ಮರವೊಂದು ಉರುಳಿಬಿದ್ದಿರುವ ಘಟನೆ ಮಹಾತ್ಮಗಾಂಧಿ ರಸ್ತೆಯ ಇಂಡಿಯಾ ಗ್ಯಾರೇಜ್‌ ಬಳಿ ನಡೆದಿದೆ. ಅದೃಷ್ಟವಶಾತ್‌ ಪ್ರಯಾಣಿಕರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು ಬಿಟ್ಟರೆ ಯಾವುದೇ ಅನಾಹುತ ಸಂಭವಿಸಿಲ್ಲ.

ಬೆಳಗ್ಗೆ 9.15ರ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಿಎಂಟಿಸಿ ಬಸ್‌ ಶಿವಾಜಿನಗರದಿಂದ ವರ್ತೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ಬಸ್‌ ಮೇಲೆ ಮರ ಉರುಳಿಬಿದ್ದಿದೆ. ಈ ವೇಳೆ ಬಸ್‌ನಲ್ಲಿ ಪ್ರಯಾಣಿಕರು ಕಡಿಮೆ ಇದ್ದರು ಎನ್ನಲಾಗಿದೆ.

Share Post