CrimeDistricts

ಎತ್ತಿನ ಬಂಡಿಗೆ ಗುದ್ದಿದ ಬಸ್;‌ ಎರಡೂ ಎತ್ತು ಸಾವು, ರೈತ ಗಂಭೀರ

ಬಳ್ಳಾರಿ; ಕರ್ನಾಟಕ ಸಾರಿಗೆ ಬಸ್‌ ವೇಗವಾಗಿ ಬಂದು ಎತ್ತಿನ ಬಂಡಿಗೆ ಗುದ್ದಿದ್ದು, ಎರಡೂ ಎತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಬಳಿ ನಡೆದಿದೆ. ಘಟನೆಯಲ್ಲಿ ರೈತನಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

   ಬೆಂಗಳೂರಿನಿಂದ ಲಿಂಗಸೂಗೂರಿಗೆ ಹೊರಟಿದ್ದ ಸಾರಿಗೆ ಬಸ್, ಎತ್ತಿನ ಚಕ್ಕಡಿಗೆ ಎದುರಿನಿಂದ ರಭಸವಾಗಿ ಡಿಕ್ಕಿಯಾಗಿದೆ. ರೈತ ಶೇಕ್ಷವಲಿ(42 ) ತೀವ್ರ ಗಾಯಗೊಂಡಿದ್ದು, ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post