BengaluruPolitics

ಕುಮಾರಸ್ವಾಮಿ ಏಟಿಗೆ ಡಿಕೆಶಿ ಎದಿರೇಟು; ಎಷ್ಟು ಅಂತ ಅವರ ಮೇಲೆ ಕುಸ್ತಿ ಮಾಡ್ತೀರಾ..?‌ – ಡಿಕೆಶಿ

ಬೆಂಗಳೂರು; ಕುಮಾರ ಸ್ವಾಮಿ ವಿರುದ್ಧ ದೊಡ್ಡ ಜಂಗೀಕುಸ್ತಿಯೇ ನಡೆದುಹೋಗಿದೆ. ಅವರ ಮೇಲೆ ಎಷ್ಟು ಅಂತ ಕುಸ್ತಿ ಮಾಡ್ತೀರಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೂರು ಜನ ಬಂದ್ರೂ ಹೆದರಲ್ಲ ಎಂಬ ಹೆಚ್‌.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ತಿರುಗೇಟು ನೀಡಿದ್ರು.

ನನ್ನನ್ನು ಏಳು ಬಾರಿ ಜನ ಸುಮ್ಮನೆ ಗೆಲ್ಲಿಸಿಬಿಟ್ರಾ..?, ನನ್ನ ವಿರುದ್ಧ ಕುಮಾರಸ್ವಾಮಿ ನಿಂತಿದ್ರಲ್ಲಾ ಆಗ ನನ್ನನ್ನ ಸುಮ್ಮನೆ ಗೆಲ್ಲಿಸಿದ್ರಾ..? ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ. ಎಷ್ಟು ಅಂತ ಅವರ ಮೇಲೆ ಕುಸ್ತಿ ಮಾಡ್ತೀರಾ..?‌. ನನಗೂ ಅವರಿಗೂ ದೊಡ್ಡ ಜಂಗಿಕುಸ್ತಿಯೇ ನಡೆದಿದೆ. ಅವರ ವೈಫ್‌ ವಿರುದ್ಧ ನನ್ನ ತಮ್ಮ ನಿಂತೂ ಆಗಿದೆ. ನಾನು ಉತ್ತರ ಕೊಡಬೇಕಿರೋದು ಕುಮಾರಸ್ವಾಮಿಗಲ್ಲ, ನಾನು ಜನಕ್ಕೆ ಉತ್ತರ ಕೊಡಬೇಕಿರೋದು ಎಂದು ಡಿ.ಕೆ.ಶಿವಕುಮಾರ್‌ ಇದೇ ವೇಳೆ ಹೇಳಿದ್ರು.

Share Post