NationalPolitics

ವಿಶ್ವಾಸಮತ ಗೆದ್ದ ಏಕನಾಥ್‌ ಶಿಂಧೆ; ಸರ್ಕಾರದ ಪರ 164 ಮತ

ಮುಂಬೈ; ಮಹಾರಾಷ್ಟ್ರದಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿದ್ದ ರಾಜಕೀಯ ಬಿಕ್ಕಟ್ಟು ಇಂದಿಗೆ ಅಂತ್ಯವಾಗಿದೆ. ಕೆಲ ದಿನಗಳ ಹಿಂದಷ್ಟೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದ ಏಕನಾಥ್‌ ಶಿಂಧೆ ಇಂದು ಬಹುಮತ ಸಾಬೀತು ಮಾಡಿದ್ದಾರೆ. ಬಹುಮತ ಪರೀಕ್ಷೆಯಲ್ಲಿ ಏಕನಾಥ್‌ ಶಿಂಧೆ ಪಾಸ್‌ ಆಗಿದ್ದಾರೆ.

ಬಹುಮತ ಗೆಲ್ಲಲು 144 ಶಾಸಕರ ಬೆಂಬಲ ಬೇಕಾಗಿತ್ತು. ಆದ್ರೆ ವಿಶ್ವಾಸಮತ ಯಾಚನೆ ವೇಳೆ 164 ಶಾಸಕರು ಏಕನಾಥ್‌ ಶಿಂಧೆ ಪರವಾಗಿ ಮತ ಚಲಾಯಿಸಿದ್ದಾರೆ. ಹೀಗಾಗಿ ಶಿವಸೇನೆಯ ಬಂಡಾಯ ಬಣ ಹಾಗೂ ಬಿಜೆಪಿ ನೇತೃತ್ವ ಸರ್ಕಾರ ಸುಭದ್ರವಾದಂತಾಗಿದೆ.  ಎರಡು ದಿನಗಳ ಕಾಲ ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ, ಭಾನುವಾರದಂದು ಸ್ಪೀಕರ್ ಆಯ್ಕೆ ಮಾಡಲಾಗಿತ್ತು. ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಬಂಡಾಯ ಶಾಸಕರ ನೆರವಿನೊಂದಿಗೆ 164 ಮತಗಳನ್ನು ಗಳಿಸುವ ಮೂಲಕ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಶಿಂಧೆ ಬಹುಮತ ಸಾಬೀತಿಗೆ ಮತಗಳ ಕೊರತೆಯಾಗಲಿಲ್ಲ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಮತಗಳ ಅವಶ್ಯಕತೆ ಇದ್ದು, ಓರ್ವ ಶಾಸಕನ ನಿಧನದಿಂದ ಇದು 144ಕ್ಕೆ ಇಳಿದಿದೆ.

Share Post