NationalPolitics

ದೆಹಲಿ ಪೊಲೀಸರ ದೌರ್ಜನ್ಯಕ್ಕೆ ಆಕ್ರೋಶ; ಸ್ಪೀಕರ್‌ ಭೇಟಿಯಾದ ಕಾಂಗ್ರೆಸ್‌ ನಿಯೋಗ

ನವದೆಹಲಿ; ಕಾಂಗ್ರೆಸ್‌ ಸಂಸದರ ಮೇಲೆ ದೆಹಲಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್‌ ಸಂಸದರ ನಿಯೋಗ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದೆ. ಅಧೀರ್‌ ರಂನ್‌ ಚೌಧರಿ ನೇತೃತ್ವದಲ್ಲಿ ಸ್ಪೀಕರ್‌ ಭೇಟಿಯಾದ ಕಾಂಗ್ರೆಸ್‌ ಸಂಸದರು, ದೆಹಲಿ ಪೊಲೀಸರು ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊ೦ಂಡಿದ್ದಾರೆ. ಹೀಗಾಗಿ ಸಂಸದರ ರಕ್ಷಣೆಗೆ ಧಾವಿಸಬೇಕೆಂದು ಮನವಿ ಮಾಡಿದ್ದಾರೆ.

 

ಸ್ಫೀಕರ್‌ ಓಂ ಬಿರ್ಲಾ ಭೇಟಿ ನಂತರ ಮಾತನಾಡಿದ ಸಂಸದ ಡಿ.ಕೆ.ಸುರೇಶ್‌, ದೆಹಲಿ ಪೊಲೀಸರ ನಡವಳಿಕೆ ವಿರುದ್ಧ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ನಮ್ಮ ಕಚೇರಿಗೆ ಹೋಗುವುದಕ್ಕೂ ನಿರ್ಬಂಧ ವಿಧಿಸಿದ್ದಾರೆ. ನಮ್ಮ ಮೇಲೆ ದೆಹಲಿ ಪೊಲೀಸರು ನಡೆಸಿದ ದೌರ್ಜನ್ಯದ ವಿಡಿಯೋಗಳನ್ನು ಕೂಡಾ ಸ್ಪೀಕರ್‌ ಅವರಿಗೆ ನೀಡಿದ್ದೇವೆ. ಸಂಸದರ ರಕ್ಷಣೆಗೆ ಧಾವಿಸುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

Share Post