CrimeDistricts

ಕಲುಷಿತ ನೀರು ಸೇವನೆ; ಮೃತರ ಸಂಖ್ಯೆ ಆರಕ್ಕೆ ಏರಿಕೆ

ರಾಯಚೂರು; ರಾಯಚೂರು ನಗರದಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ವಾರ್ಡ್‌ ನಂಬರ್‌ 12 ರ ನಿವಾಸಿ ನಯೀಮುದ್ದಿನ್‌ ಸಾವನ್ನಪ್ಪಿದ ವ್ಯಕ್ತಿ. ಇದರಿಂದಾಗಿ ಕಲುಷಿತ ನೀರಿಗೆ ಒಟ್ಟು ಆರು ಮಂದಿ ಬಲಿಯಾದಂತಾಗಿದೆ.

 

ಕಳೆದ ಹದಿನೈದು ದಿನಗಳಿಂದ ರಾಯಚೂರು ನಗರದಲ್ಲಿ ಕಲುಷಿತ ನೀರು ಸೇವನೆಯಿಂದ ನೂರಾರು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹದಿನೈದು ದಿನಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.

 

ಸ್ಥಳೀಯ ನಗರಸಭೆಯ ನಿರ್ಲಕ್ಷ್ಯದಿಂದಾಗಿ ಕಲುತ ನೀರು ಪೂರೈಕೆಯಾಗಿತ್ತು. ಅದನ್ನೇ ಕುಡಿದ ಜನರು ಅಸ್ವಸ್ಥರಾಗಿದ್ದಾರೆ. ವಿವಿಧ ಕಾಯಿಲೆಗಳಿಂದ ಆಸ್ಪತ್ರೆ ಸೇರಿದ್ದಾರೆ.

 

Share Post