BengaluruPolitics

ಪೈಗಂಬರ್‌ ಬಗ್ಗೆ ಮಾತನಾಡಬೇಡಿ; ಬಿಜೆಪಿ ನಾಯಕರಿಗೆ ಅರುಣ್‌ ಸಿಂಗ್‌ ಸೂಚನೆ

ಬೆಂಗಳೂರು; ನೂಪುರ್‌ ಶರ್ಮಾ ಹೇಳಿಕೆಯಿಂದ ಅರಬ್‌ ರಾಷ್ಟ್ರಗಳಿಂದ ತೀವ್ರ ಖಂಡನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಯಾರೂ ಪೈಗಂಬರ್‌ ಬಗ್ಗೆ ಹೇಳಿಕೆ ನೀಡದಂತೆ ಬಿಜೆಪಿ ತನ್ನ ಮುಖಂಡರಿಗೆ ಸೂಚನೆ ನೀಡುತ್ತಿದೆ ಎನ್ನಲಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌, ರಾಜ್ಯ ಬಿಜೆಪಿ ನಾಯಕರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ನಾಯಕರು ಯಾರೂ ಪೈಗಂಬರ್‌ ಬಗ್ಗೆ ಮಾತನಾಡಬಾರದು. ಆ ರೀತಿಯ ಹೇಳಿಕೆ ನೀಡಿದರೆ ಪಕ್ಷದಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರುಣ್‌ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Share Post