Bengaluru

ವಿಜಯೇಂದ್ರಗೆ ಟಿಕೆಟ್‌ ಕೈತಪ್ಪಿದ ವಿಚಾರ; ಇದಕ್ಕೂ ಬಿ.ಎಲ್‌.ಸಂತೋಷ್‌ಗೂ ಸಂಬಂಧವಿಲ್ಲ – ಬಿಎಸ್‌ವೈ

ಬೆಂಗಳೂರು; ಬಿ.ವೈ.ವಿಜಯೇಂದ್ರಗೆ ವಿಧಾನಪರಿಷತ್‌ ಟಿಕೆಟ್‌ ಕೈತಪ್ಪಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಟಿಕೆಟ್‌ ಕೈತಪ್ಪುವುದಕ್ಕೂ ಬಿ.ಎಲ್‌.ಸಂತೋಷ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಪಕ್ಷ ನಿಷ್ಠೆ ಹಾಗೂ ಸಾಮರ್ಥ್ಯ ಇರುವವರಿಗೆ ಯಾವತ್ತೂ ಅವಕಾಶ ನೀಡುತ್ತದೆ. ನಿಷ್ಠೆ ಇರುವವರನ್ನು ಬಿಜೆಪಿ ಯಾವತ್ತೂ ಕೈಬಿಟ್ಟ ಉದಾಹರಣೆ ಇಲ್ಲ ಎಂದು ಯಡಿಯೂರಪ್ಪ ಅವರು, ಮುಂದೆ ಬೇರೆ ಬೇರೆ ಅವಕಾಶಗಳು ಸಿಗಲಿವೆ ಎಂದು ಹೇಳಿದರು. ೨೦೨೩ಕ್ಕೆ ಪಕ್ಷ ಅಧಿಕಾರಕ್ಕೆ ಬರಬೇಕೆಂಬುದು ನಮ್ಮ ಗುರಿ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆಂಬ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡುತ್ತೇವೆಂದು ಅವರು ಹೇಳಿದರು.

Share Post