Districts

ಪಿಎಸ್‌ಐ ನೇಮಕಾತಿ ಅಕ್ರಮ ಹಿನ್ನೆಲೆ; ಬಂಧಿತನ ಸಹೋದರ ಆತ್ಮಹತ್ಯೆ

ಹಾಸನ: ಪಿಎಸ್‌ಐ ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ ಬಂಧಿತನಾಗಿರುವ ಹಾಸನ ಜಿಲ್ಲೆ ಹೊಳೆನರಸೀಪುರದ ಅಭ್ಯರ್ಥಿ ಮನುಕುಮಾರ್‌ ಅವರ ಹಿರಿಯ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂವತ್ತಾರು ವರ್ಷದ ವಾಸು ಆತ್ಮಹತ್ಯೆ ಮಾಡಿಕೊಂಡವರು. ಸಹೋದರ ಮನುಕುಮಾರ್‌ ಬಂಧನವಾದ ಮೇಲೆ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಡಿ ಗ್ರೂಪ್‌ ನೌಕರನಾಗಿ ಕೆಲಸ ಮಾಡುತ್ತಿದ್ದ ವಾಸು ಅವರನ್ನು ಇತ್ತೀಚೆಗೆ ಕೆಲಸದಿಂದ ವಜಾ ಮಾಡಲಾಗಿತ್ತು. ಇದ್ರಿಂದ ದಿಕ್ಕುತೋಚದೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಸಹೋದರ ಮನು ಕುಮಾರ್‌ ಅವರನ್ನು ಪಿಎಸ್‌ಐ ಮಾಡುವ ಕನಸು ಕಂಡಿದ್ದ ವಾಸು, ಲಕ್ಷಾಂತರ ಹಣ ಹೊಂದಿಸಿ ಮಧ್ಯವರ್ತಿಯೊಬ್ಬರಿಗೆ ಕೊಟ್ಟಿದ್ದರು. ಈಗ ಹಣವೂ ಹೋಯ್ತು, ಕೆಲಸವೂ ಹೋಯ್ತು ಎಂದು ಕಂಗಾಲಾಗಿದ್ದ ವಾಸು ತಮ್ಮ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಗನನ್ನು ಕೆಲಸದಿಂದ ತೆಗೆಯಲಾಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಾಯಿ ಶಿವಮ್ಮ ತಿಳಿಸಿದರು.

Share Post