Districts

ಈಶ್ವರಪ್ಪರನ್ನು ಬಂಧಿಸುವವರೆಗೂ ಮೃತದೇಹ ತೆಗೆಯಲ್ಲ; ಸಂತೋಷ್‌ ಸಹೋದರ

ಉಡುಪಿ: ಸಚಿವ ಈಶ್ವರಪ್ಪ ಹಾಗೂ ಇತರ ಆರೋಪಿಗಳನ್ನು ಬಂಧಿಸುವವರೆಗೂ ಸಂತೋಷ್‌ ಪಾರ್ಥೀವ ಶರೀರವನ್ನು ತೆಗೆಯುವುದಿಲ್ಲ ಎಂದು ಸಂತೋಷ್‌ ಸಹೋದರ ಪ್ರಶಾಂತ್‌ ಪಾಟೀಲ್‌ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಆತ್ಮಹತ್ಯೆಗೂ ಮುನ್ನ ಸಂತೋಷ್‌ ಏನು ಹೇಳಿದ್ದಾರೋ ಅದೆಲ್ಲಾ ಸತ್ಯವಿದೆ. ಹೀಗಾಗಿ, ನನ್ನ ಸಹೋದರನ ಸಾವಿಗೆ ಕಾರಣರಾದ ಈಶ್ವರಪ್ಪರನ್ನು ಬಂಧಿಸಲೇಬೇಕು ಎಂದು ಪ್ರಶಾಂತ್‌ ಪಾಟೀಲ್‌ ಆಗ್ರಹಿಸಿದ್ದಾರೆ.

 

 

 

Share Post