Districts

ಮಾಜಿ ಶಾಸಕ ಕೆ.ರಾಜು ಮನೆಗೆ ಮುತ್ತಿಗೆ ಹಾಕಲು ಜೆಡಿಎಸ್‌ ಕಾರ್ಯಕರ್ತರು ಯತ್ನ

ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಮಾಜಿ ಶಾಸಕ ಕೆ. ರಾಜು ಲಘುವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ರಾಮನಗರದಲ್ಲಿ ಯುವ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಾಮನಗರದ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಕಚೇರಿ ಮುಂದೆ ಯುವ ಸಮಾವೇಶಗೊಂಡ ಜೆಡಿಎಸ್ ಕಾರ್ಯಕರ್ತರು, ಮುಖಂಡ ಉಮೇಶ್ ನೇತೃತ್ವದಲ್ಲಿ ಮಾಜಿ ಶಾಸಕ ಕೆ. ರಾಜು ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಪ್ರತಿಭಟನೆ ಹಾಗೂ ರಾಜು ಮನೆಗೆ ಮುತ್ತಿಗೆ ಹಾಕಲು ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪ್ರತಿಭಟನಾ ನಿರತರನ್ನು ಪೊಲೀಸರು ತಡೆದಿದ್ದಾರೆ. ಪೊಲೀಸರು ತಡೆದ ಕಾರಣ ರಾಜು ಮನೆಗೆ ಮುತ್ತಿಗೆ ಹಾಕುವುದನ್ನು ಕೈ ಬಿಟ್ಟ ಪ್ರತಿಭಟನಾನಿರತರು, ನಿಂತ ಸ್ಥಳದಲ್ಲಿಯೇ ರಾಜು ವಿರುದ್ಧ ಪ್ಲೇ ಕಾರ್ಡ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ನಿಂದ ಶಾಸಕರಾಗಿ, ಕುಮಾರಸ್ವಾಮಿ ಅವರ ಋಣದಲ್ಲಿರುವ ಕೆ. ರಾಜು ತಕ್ಷಣವೇ ಹೆಚ್ಡಿಕೆಯವರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಅವರ ಮನೆಗೆ ಮುತ್ತಿಗೆ ಹಾಕುವುದಲ್ಲದೇ, ಅವರ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ರು.

Share Post