Cinema

ಕನ್ನಡ ಚಿತ್ರರಂಗದ ಖ್ಯಾತ ನಟ ಅಶೋಕ್‌ ರಾವ್‌ ಇನ್ನಿಲ್ಲ

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಅಶೋಕ್‌ ರಾವ್‌ ಕ್ಯಾನ್ಸರ್‌ ಖಾಯಿಲೆಯಿಂದ ಬಳಲುತ್ತಿದ್ದರು. ಇಂದು ಅವರು ಕೊನೆಯುಸಿರೆಳೆದಿದ್ದಾರೆ.

ಕಳೆದ 15ದಿನಗಳಿಂದ ಸತತವಾಗಿ ಚಿಕಿತ್ಸೆ ಪಡೆಯುತ್ತಿದ್ದ ಅಶೋಕ್‌ ರಾವ್‌ ಮಧ್ಯ ರಾತ್ರಿ 12.30 ಕ್ಕೆ ನಿಧನರಾಗಿದ್ದಾರೆ.

ನಟ ಅಶೋಕ್‌ ರಾವ್‌ ಅವರು ಕನ್ನಡದ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ಡಾ ರಾಜ್‌ ಕುಮಾರ್‌ ಅವರೇ ಕರೆದು ಪರಶುರಾಮ ಸಿನಿಮಾದಲ್ಲಿ ಕಳನಾಯಕನ ಪಾತ್ರ ನಿರ್ವಹಿಸುವಂತೆ ಕೇಳಿಕೊಂಡಿದ್ದರು.

ಅಶೋಕ್‌ ರಾವ್‌ ಅವರು ತಮ್ಮ ಪತ್ನಿ, ಮಗ ಹಾಗೂ ಸೊಸೆಯನ್ನು ಅಗಲಿದ್ದಾರೆ. ಸಾವಿನ ಸುದ್ದಿ ಕೊಂಚ ತಡವಾಗಿ ಬೆಳಕಿಗೆ ಬಂದಿದೆ.

Share Post