Districts

ಹಸಿದವರ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿಕೊಳ್ಳಿ ಎನ್ನುವ ಬಜೆಟ್‌-ಕುಮಾರಸ್ವಾಮಿ

ರಾಮನಗರ: ಕೇಂದ್ರ ಸರ್ಕಾರದ ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಈ ಬಜೆಟ್‌ ಶೂನ್ಯವಾಗಿದೆ. ಇಂದಿನ ಬಜೆಟ್‌ ಬಗ್ಗೆ ಹೆಚ್ಚಾಗಿ ಹೇಳುವಂಥದ್ದೇನೂ ಇಲ್ಲ. ಹಸಿದವರ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕುವ ಪ್ರಯತ್ನ ಮಾಡಿದ್ದಾರೆ ಅಷ್ಟೇ ಎಂದು ರಾಮನಗರದಲ್ಲಿ ಹೆಚ್‌ಡಿಕೆ ಪ್ರತಿಕ್ರಿಯೆ ನೀಡಿದ್ರು.

ಅಭಿವೃದ್ಧಿಗೆ ಪೂರಕವಾಗಿರುವ ಅಂಶಗಳು ಕೇಂದ್ರ ಸರ್ಕಾರ ಘೋಷಿಸಿರುವ ಬಜೆಟ್‌ನಲ್ಲಿ ಏನೂ ಇಲ್ಲ. ನದಿಗಳ ಜೋಡಣೆ ಬಗ್ಗೆ ಪ್ರತಿವರ್ಷವೂ ಹೇಳುತ್ತಾ ಬಂದಿದ್ದಾರೆ. ಮೂರು ವರ್ಷಗಳಿಂದ ಹೇಳುತ್ತಿದ್ದಾರೆ. ಆದರೆ ಅದು ಕಾರ್ಯರೂಪಕ್ಕೆ ಬರುವುದು ಯಾವಾಗ ಎಂದು ಪ್ರಶ್ನಿಸಿದ್ದಾರೆ. ಪ್ರತಿವರ್ಷ ಹೇಳಿದ್ದನ್ನೇ ಹೇಳುತ್ತಿದ್ದಾರೆ. ಈ ವರ್ಷ ಕೂಡ ನದಿ ಜೋಡಣೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಒಂದು ನೆಮ್ಮದಿ ಸಂಗತಿ ಅಂದ್ರೆ ಈ ಬಾರಿ ಜನರ ಮೇಲೆ ಭಾರೀ ತೆರಿಗೆ ಹೇರಿಲ್ಲ ಎಂಬುದೊಂದೇ ನಿಟ್ಟುಸಿರು ಬಿಡುವ ವಿಚಾರ ಎಂದು ವ್ಯಂಗ್ಯವಾಡಿದ್ರು.

Share Post