Cinema

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕಟ್ಟೆ ರಾಮಚಂದ್ರ ಇನ್ನಿಲ್ಲ

ಬೆಂಗಳೂರು: ಅರಿವು ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಸ್ಯಾಂಡಲ್‌ವುಡ್‌ ಹಿರಿಯ ಚಿತ್ರ ನಿರ್ದೇಶಕ ಕಟ್ಟೆ ರಾಮಚಂದ್ರ ನಿಧನರಾಗಿದ್ದಾರೆ. ಎಪ್ಪತ್ತೈದು ವರ್ಷ ವಯಸ್ಸಿನ ಕಟ್ಟೆ ರಾಮಚಂದ್ರ ಅವರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ ಅವರು ನಿಧರಾಗಿದ್ದಾರೆ. ಚಾಮರಾಜಪೇಟೆ ರುಧ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಮಹಾಲಕ್ಷ್ಮೀ, ವೈಶಾಖದ ದಿನಗಳು, ಅರಿವು ಸೇರಿದಂತೆ ಹಲವು ಸಿನಿಮಾಗಳನ್ನು ಕಟ್ಟೆ ರಾಮಚಂದ್ರ ನಿರ್ಮಿಸಿ, ನಿರ್ದೇಶಿಸಿದ್ದರು. ಐದು ದಿನಗಳ ಹಿಂದೆ ಅಂದರೆ ಕಳೆದ ಭಾನುವಾರವಷ್ಟೇ ಕಟ್ಟೆ ರಾಮಚಂದ್ರ ಪತ್ನಿ ತೀರಿಕೊಂಡಿದ್ದರು. ಆಗ ಆಸ್ಪತ್ರೆಯಲ್ಲಿದ್ದ ಕಟ್ಟೆ ರಾಮಚಂದ್ರ ಪತ್ನಿ ತೀರಿಕೊಂಡ ಸುದ್ದಿ ಕೇಳಿ ಆಘಾತಗೊಂಡಿದ್ದರು.

Share Post